ಶಹಾಪುರ: ತಾಲ್ಲೂಕಿನ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವಾಗಿದ್ದು, ಆಕೆ ಗರ್ಭವತಿಯಾದ ಬಗ್ಗೆ ಗೋಗಿ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ತಾಲ್ಲೂಕಿನ ಗಂಗನಾಳ ಗ್ರಾಮದ ಶಂಕರ ಅಯ್ಯಪ್ಪ ವಾಗಣಗೇರಿ ಅತ್ಯಾಚಾರ ಎಸಗಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
‘ಮದುವೆಯಾದ ಒಂದು ವರ್ಷದಲ್ಲಿ ಪತಿ ಮೃತಪಟ್ಟರು. ಎಮ್ಮೆ ಕಾಯಲು ಮತ್ತು ಉರುವಲು ಕಟ್ಟಿಗೆ ತರಲು ಹೊಲಕ್ಕೆ ಹೋಗುವಾಗ ಪರಿಚಯವಾದ ಶಂಕರ ಮದುವೆ ಆಗುವುದಾಗಿ ನಂಬಿಸಿದ. ನಂತರ ನನ್ನ ಇಚ್ಛೆ ವಿರುದ್ಧ ಅತ್ಯಾಚಾರವೆಸಗಿದೆ. ಈಗ ನಾನು ಏಳು ತಿಂಗಳು ಗರ್ಭವತಿ. ಮದುವೆಯಾಗುವಂತೆ ಒತ್ತಾಯಿಸಿದರೆ, ಜೀವ ಬೆದರಿಕೆ ಒಡ್ಡುತ್ತಾನೆ’ ಎಂದು ಮಹಿಳೆ ದೂರಿನಲ್ಲಿ
ತಿಳಿಸಿದ್ದಾರೆ.
‘ನನಗೆ ಜೀವ ಬೆದರಿಕೆಯಿದ್ದು, ಕುಟುಂಬದವರು ಯಾವುದೇ ಸಂದರ್ಭದಲ್ಲಿ ಹಲ್ಲೆ ನಡೆಸುವ ಭೀತಿ ಇದೆ. ತಕ್ಷಣ ಆರೋಪಿಯನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು’ ಎಂದು ಅವರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗೆ ಮನವಿ
ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.