ADVERTISEMENT

‘ಉತ್ತಮ ಸೇವೆಗೆ ಎಲ್ಲರ ಸಹಕಾರ ಅಗತ್ಯ’

ನೂತನ ಬಿಇಒ ಮಲ್ಲಿಕಾರ್ಜುನ ಪೂಜಾರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:31 IST
Last Updated 30 ಜುಲೈ 2023, 14:31 IST
ಚಿತ್ರಶೀರ್ಷಿಕೆ:30ಎಸ್‍ಡಿಪಿಆರ್1: ಯಾದಗಿರಿ ನಗರದಲ್ಲಿ ಸೈದಾಪುರ ಆತ್ಮೀಯರ ಬಳಗದ ವತಿಯಿಂದ ಬಿಇಒ ಅಧಿಕಾರವನ್ನು ವಹಿಸಿಕೊಂಡ ಮಲ್ಲಿಕಾರ್ಜುನ ಪೂಜಾರಿಯನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಸಾಬಯ್ಯ, ಕಾಶೀನಾಥ ಶೇಖಸಿಂದಿ, ರಾಚಯ್ಯ ಸ್ವಾಮಿ ಬಾಡಿಯಾಲ ಸೇರಿದಂತೆ ಇತರರಿದ್ದರು.
ಚಿತ್ರಶೀರ್ಷಿಕೆ:30ಎಸ್‍ಡಿಪಿಆರ್1: ಯಾದಗಿರಿ ನಗರದಲ್ಲಿ ಸೈದಾಪುರ ಆತ್ಮೀಯರ ಬಳಗದ ವತಿಯಿಂದ ಬಿಇಒ ಅಧಿಕಾರವನ್ನು ವಹಿಸಿಕೊಂಡ ಮಲ್ಲಿಕಾರ್ಜುನ ಪೂಜಾರಿಯನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಸಾಬಯ್ಯ, ಕಾಶೀನಾಥ ಶೇಖಸಿಂದಿ, ರಾಚಯ್ಯ ಸ್ವಾಮಿ ಬಾಡಿಯಾಲ ಸೇರಿದಂತೆ ಇತರರಿದ್ದರು.   

ಸೈದಾಪುರ: ‘ಉತ್ತಮ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಅತ್ಯಗತ್ಯ. ತೆರವಾಗಿರುವ ಸ್ಥಾನದಲ್ಲಿ ನನ್ನನ್ನು ನಿಯೋಜಿಸಿರುವ ಕಾರಣ ಜವಾಬ್ದಾರಿ ಹೆಚ್ಚಾಗಿದೆ’ ಎಂದು ನೂತನ ಬಿಇಒ ಮಲ್ಲಿಕಾರ್ಜುನ ಪೂಜಾರಿ ಅಭಿಪ್ರಾಯಪಟ್ಟರು.

ಯಾದಗಿರಿ ನಗರದಲ್ಲಿ ಸೈದಾಪುರ ಆತ್ಮೀಯರ ಬಳಗದಿಂದ‌‌ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಈಗಾಗಲೇ ನಾನು ಕ್ಷೇತ್ರ ಸಮನ್ವಯಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದು, ಈ ಕೆಲಸ ನಿರ್ವಹಿಸಲು ನೆರವಾಗಬಹುದು. ನಾನು ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳಲ್ಲಿನ ಆತ್ಮೀಯರು ನನ್ನನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಸಂತಸ ಉಂಟು ಮಾಡಿದೆ. ಮುಂದೆಯೂ ನಿಮ್ಮ ಸಹಕಾರ ಇದೇ ರೀತಿ ಮುಂದುವರಿಯಲಿ’ ಎಂದು ಆಶಿಸಿದರು.

ADVERTISEMENT

ವಿದ್ಯಾವರ್ಧಕ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಸಾಬಯ್ಯ ರಾಯಪ್ಪನೋರ ರಾಮಸಮುದ್ರ, ಶಿಕ್ಷಕರಾದ ಕಾಶೀನಾಥ ಶೇಖಸಿಂದಿ, ರಾಚಯ್ಯ ಸ್ವಾಮಿ ಬಾಡಿಯಾಲ, ತೋಟೇಂದ್ರ ಸೇರಿದಂತೆ ಇದ್ದರು.

Quote - ‘ಉತ್ತಮ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಅತ್ಯಗತ್ಯ. ತೆರವಾಗಿರುವ ಸ್ಥಾನದಲ್ಲಿ ನನ್ನನ್ನು ನಿಯೋಜಿಸಿರುವ ಕಾರಣ ಜವಾಬ್ದಾರಿ ಹೆಚ್ಚಾಗಿದೆ’ ಎಂದು ನೂತನ ಬಿಇಒ ಮಲ್ಲಿಕಾರ್ಜುನ ಪೂಜಾರಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.