ADVERTISEMENT

ಬೀಜ, ಗೊಬ್ಬರ ಬೇರೆ ಜಿಲ್ಲೆಗೆ ಮಾರಾಟಮಾಡಿದರೆ ಪರವಾನಗಿ ರದ್ದು: ದೇವಿಕಾ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 16:17 IST
Last Updated 21 ಜೂನ್ 2021, 16:17 IST
ಆರ್.ದೇವಿಕಾ
ಆರ್.ದೇವಿಕಾ   

ಯಾದಗಿರಿ: ಜಿಲ್ಲೆಗೆ ನಿಗದಿಪಡಿಸಿದ ಬಿ.ಟಿ ಹತ್ತಿ ಮತ್ತು ರಸಗೊಬ್ಬರ ಕೀಟನಾಶಕಗಳನ್ನು ಜಿಲ್ಲೆಯ ರೈತರಿಗೆ ಮಾತ್ರ ಮಾರಾಟ ಮಾಡಬೇಕು. ಬೀಜ, ಗೊಬ್ಬರ ಬೇರೆ ಜಿಲ್ಲೆಗೆ ಮಾರಾಟ
ಮಾಡಿದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌ ತಿಳಿಸಿದ್ದಾರೆ.

ಜಿಲ್ಲೆಯ ಗಡಿ ಭಾಗದ ತಾಲ್ಲೂಕುಗಳಿಂದ ಬೇರೆ ಜಿಲ್ಲೆಯ ರೈತರಿಗೆ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಜಿಲ್ಲೆಗೆ ನಿಗದಿಪಡಿಸಿದ ಬಿ.ಟಿ ಹತ್ತಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬೇರೆ ಜಿಲ್ಲೆಯ ರೈತರಿಗೆ ನೀಡುವ, ಪರಿಕರ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮಕೈಗೊಂಡು ಅವರಿಗೆ ನೀಡಿದ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT