ಶಹಾಪುರ: ತಾಲ್ಲೂಕಿನ ಮುಡಬೂಳ ಗ್ರಾಮದ ವೀರಭದ್ರ ನಾಯ್ಕಲ್ ಎನ್ನುವವರು ‘ನಮಗೆ ಎರಡು ಕೆ.ಜಿ ಅಕ್ಕಿ ಕಡಿಮೆ ಕೊಡಿ ಆದರೆ, ಎಣ್ಣೆ (ಮದ್ಯ) ಮಾತ್ರ ನಿಲ್ಲಿಸಬೇಡಿ’ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಗೂಡ್ಸ್ ವಾಹನದ ಚಾಲಕನಾಗಿ ಸೇವೆ ಸಲ್ಲಿಸುತ್ತಿರುವ ಇವರು ಲಾಕ್ಡೌನ್ ಆದ ಬಳಿಕ ಗ್ರಾಮದಲ್ಲಿ ಇದ್ದಾರೆ. ಗುಂಡು ಪ್ರಿಯರಾಗಿದ್ದು, ಮಂಗಳವಾರ ವಾರಿಗೆಯ ಗೆಳೆಯರೆಲ್ಲರೂ ಕೂಡಿಕೊಂಡು ಮೊಬೈಲ್ನಲ್ಲಿ ವಿಡಿಯೊ ಮಾಡಿಕೊಂಡು ಹರಿಬಿಟ್ಟಿದ್ದಾರೆ. ಖಾಸಗಿ ಟಿವಿ ಚಾನಲ್ ಒಂದರಲ್ಲಿ ಮದ್ಯದ ಬಗ್ಗೆ ಚರ್ಚೆ ನಡೆದಾಗ ಆಕಸ್ಮಿಕವಾಗಿ ಹರಿಬಿಟ್ಟ ವಿಡಿಯೊ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಲಾಕ್ಡೌನ್ ಎಷ್ಟು ದಿನ ಬೇಕಾದರೂ ವಿಸ್ತರಿಸಿ ಆದರೆ, ಮದ್ಯದ ಅಂಗಡಿ ಮಾತ್ರ ತೆಗೆಯಿರಿ ಎಂದು ಪ್ರಧಾನಿ, ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.₹100–200 ಗೆ ಸಿಗುವ ಮದ್ಯ ಎರಡು ಮೂರು ಪಟ್ಟು ಹೆಚ್ಚಳವಾಗಿದೆ. ಇದು ಅಕ್ರಮವಾಗಿ ಮಾರಾಟವಾಗುತ್ತಿದೆ. ಇಷ್ಟೊಂದು ಹಣ ಕೊಟ್ಟು ಹೇಗೆ ಖರೀದಿಸಬೇಕು ಎಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.