ADVERTISEMENT

ವಡಗೇರಾ: ಮಳೆಗೆ ಹೆಸರು, ಹತ್ತಿ ಬೆಳೆಹಾನಿ; ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:52 IST
Last Updated 4 ಸೆಪ್ಟೆಂಬರ್ 2025, 6:52 IST
ವಡಗೇರಾ ತಾಲ್ಲೂಕಿನ ಗುಲಸರಂ ಗ್ರಾಮದ ರೈತರೊಬ್ಬರ ಹೆಸರು ಬೆಳೆಯ ಜಮೀನಿನಲ್ಲಿ ಮಳೆ ನೀರು ನಿಂತು ಬೆಳೆ ಹಾಳಾಗಿರುವುದು.
ವಡಗೇರಾ ತಾಲ್ಲೂಕಿನ ಗುಲಸರಂ ಗ್ರಾಮದ ರೈತರೊಬ್ಬರ ಹೆಸರು ಬೆಳೆಯ ಜಮೀನಿನಲ್ಲಿ ಮಳೆ ನೀರು ನಿಂತು ಬೆಳೆ ಹಾಳಾಗಿರುವುದು.   

ವಡಗೇರಾ: ಸತತ ಸುರಿಯುತ್ತಿರುವ ಮಳೆಯಿಂದಾಗಿ ಜಮೀನಿನಲ್ಲಿ ಮಳೆಯ ನೀರು ಸಂಗ್ರಹವಾಗಿ ಹೆಸರು ಹಾಗೂ ಹತ್ತಿ ಬೆಳೆ ಹಾಳಾಗುತ್ತಿದ್ದು, ರೈತರ ಮುಖದಲ್ಲಿ ಆತಂಕ ಆವರಿಸಿದೆ.

ಜಮೀನುಗಳಲ್ಲಿ ನೀರು ನಿಂತ ಪರಿಣಾಮ ಹೆಸರು, ಹತ್ತಿ ಬೆಳೆಗಳು ಕೊಳೆಯುತ್ತಿವೆ. ರೈತರು ‌ಸಾಲ ಮಾಡಿ, ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ, ದುಬಾರಿ ಬೆಲೆಯ ಬೀಜಗಳನ್ನು ತಂದು ಜಮೀನುಗಳಲ್ಲಿ ಬಿತ್ತನೆ ಮಾಡಿದ್ದು, ಜತೆಗೆ ರಸಾಯನಿಕ ಗೊಬ್ಬರಗಳಿಗೂ ಹಣ ಸುರಿದಿದ್ದೇವೆ. ಆದರೆ ಏನು ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಮೀನುಗಳಿಗೆ ಹೋಗಿ ಕೃಷಿ ಚಟುವಟಿಕೆಯಲ್ಲಿ ತೋಡಗಿಸಿಕೊಳ್ಳಬೇಕು ಎಂದರೆ ಸತತ ಸುರಿಯುತ್ತಿರುವ ಮಳೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಜಮೀನುಗಳಲ್ಲಿ ಕಳೆ ತುಂಬಿದೆ ಎಂದು ಪ್ರಗತಿಪರ ರೈತ ಚಂದಾಸಾ ಹುಲಿ ಹೇಳಿದರು.

ADVERTISEMENT
ಹೆಸರು ಹತ್ತಿ ಬೆಳೆಗಳು ಮಳೆಯಿಂದ ಹಾಳಾಗಿವೆ. ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ . ರೈತರ ನೆರವಿಗೆ ಸರ್ಕಾರ ಧಾವಿಸಿ ಕೂಡಲೇ ಬೆಳೆ ಪರಿಹಾರ ನೀಡಿ ಆತ್ಮಸ್ಥೈರ್ಯ ತುಂಬಬೇಕು.
ಶಿವು ಕುಮಾರ ಕೊಂಕಲ್ ರೈತ ವಡಗೇರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.