ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಆದಿ ಸಂಗಮೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ವೀರಶೈವ ಬಣಜಿಗ ಸಮಾಜದ ಮುಖಂಡರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಿವಮೂರ್ತಿ ಪಸಪೂಲ್ (ಅಧ್ಯಕ್ಷ),ದೊಡ್ಡಪ್ಪ ಮುತ್ತಿನ(ಉಪಾಧ್ಯಕ್ಷ), ಅನಿಲ್ ಕುಮಾರ ಹಾವೇರಿ (ಕಾರ್ಯದರ್ಶಿ), ಗಣಪತಿ ನಾಲವಾರ(ಸಹ ಕಾರ್ಯದರ್ಶಿ), ದೇವಪ್ಪ ಸುರಪುರ(ಕೋಶಾಧ್ಯಕ್ಷ), ನೇಮಿಸಲಾಗಿದೆ ಎಂದು ಸಮಾಜದ ಮುಖಂಡ ನೀಲಕಂಠ ದೇಸಾಯಿ ತಿಳಿಸಿದರು.
ಸಮಾಜದ ಗಣ್ಯರಾದ ಶಿವಾನಂದ ಗೋಲಗೇರಿ, ಪರಮೇಶ್ವರ ಆಂದೇಲಿ, ಸಿದ್ದಣ್ಣ ಕ್ವಾಟಿ, ಸಂಗಣ್ಣ ವಿಶ್ವಾಸ, ಸಿದ್ದು ಜಂಗಳಿ, ಸಿದ್ದು ಹುಡೇದು, ಮಹಾಂತಪ್ಪ ನೀಲಹಂಕಾರ, ದೇವೇಂದ್ರಪ್ಪ ಬಳಗಾರ, ನಾಗರಾಜ ಅವಂಟಿ, ಸಂಗಣ್ಣ ಹಳಿಸಗರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.