ADVERTISEMENT

ಗಾಜರಕೋಟ: ವಾಂತಿ ಭೇದಿ ಪ್ರಕರಣ; 23 ಜನ ಗುಣಮುಖ, ಆರೈಕೆಯಲ್ಲಿ ನಾಲ್ವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2023, 15:46 IST
Last Updated 24 ಆಗಸ್ಟ್ 2023, 15:46 IST

ಯಾದಗಿರಿ ಜಿಲ್ಲೆ ಗುರುಮಠಕಲ್‌ ತಾಲ್ಲೂಕಿನ ಗಾಜರಕೋಟ ಗ್ರಾಮದ ವಾಂತಿ ಭೇದಿಯಿಂದ 27 ಜನ ಅಸ್ವಸ್ಥಗೊಂಡಿದ್ದು, ಸದ್ಯ 23 ಜನ ಗುಣಮುಖರಾಗಿದ್ದಾರೆ ಇನ್ನುಳಿದಂತೆ, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಸಮುದಾಯ ಆರೋಗ್ಯದ ಕೇಂದ್ರದಲ್ಲಿ ತಲಾ 1, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಸೇರಿ ಒಟ್ಟು ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಸಮಸ್ಯೆ ಉಲ್ಬಣಗೊಳ್ಳದಂತೆ ಸೂಕ್ತ ಕ್ರಮಗಳು ಕೈಗೊಂಡಿದ್ದು ಮತ್ತು ಸಕಾಲದಲ್ಲಿ ಮುಂಜಾಗ್ರತೆ ಕ್ರಮ, ವೈದ್ಯಕೀಯ ಆರೈಕೆ ಲಭ್ಯವಾದ ಕಾರಣ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.