ಯಾದಗಿರಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಹನುಮಾನ್ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು.
ಛತ್ರಪತಿ ಶಿವಾಜಿ ಸೇನಾ, ಹಿಂದೂ ಸೇವಾ ಸಮಿತಿ, ಗೆಳೆಯರ ಬಳಗ, ಆದರ್ಶ ಪದವಿ ಮಹಾವಿದ್ಯಾಲಯ, ಕರಸೇವಕರು ಸೇರಿದಂತೆ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಛತ್ರಪತಿ ಶಿವಾಜಿ ಸೇನಾ: ಅಖಿಲ ಕರ್ನಾಟಕ ಹಿಂದೂಸಾಮ್ರಾಟ್ ಛತ್ರಪತಿ ಶಿವಾಜಿ ಸೇನಾ ವತಿಯಿಂದ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಸೇನಾ ಅಧ್ಯಕ್ಷ ಪರಶುರಾಮ ಶೇಗುರಕರ್ ಮಾತನಾಡಿದರು. ವೆಂಕಟೇಶ ಭೀಮನಳ್ಳಿ, ನಿತಿನ್ ಸುಕ್ಕಲೂರು, ಶ್ರೀನಿವಾಸ ಶೆಟ್ಟಿ, ಅಜಿತಕುಮಾರ, ಭರತ ಪಂಚುಮ, ಯಲ್ಲಾಲಿಂಗ ಚಾಮನಳ್ಳಿ, ಕರುಣೇಶ ಚಾಮನಳ್ಳಿ, ಅಂಬ್ರೇಷ್ ರಾಂಪುರ, ರೆಡ್ಡಿ ಇದ್ದರು.
ಹಿಂದೂ ಸೇವಾ ಸಮಿತಿ: ನಗರದ ಸ್ಟೇಷನ್ ಬಡಾವಣೆಯಲ್ಲಿ ಹಿಂದೂ ಸೇವಾ ಸಮಿತಿಯವರು ಹನುಮಾನ್ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದರು. ಹಿಂದೂ ಸೇವಾ ಸಮಿತಿಯ ಅಧ್ಯಕ್ಷ ಹಣಮಂತ ಮಡ್ಡಿ, ನಗರಸಭೆ ಮಾಜಿ ಸದಸ್ಯ ಸುರೇಶ ಮಡ್ಡಿ, ನಾರಾಯಣರಾವ ಚವ್ಹಾಣ್, ಪ್ರೊ.ಅಶೋಕ ವಾಟ್ಕರ, ಕೆಕೆಎಂಪಿ ಅಧ್ಯಕ್ಷ ವಿಜಯ ಕುಮಾರ ಚವ್ಹಾಣ್, ಖಂಡೋಬಾ ಸಗರ, ಸುರೇಶ ನವಗೀರೆ, ಹಿಂದೂ ಜಾಗ್ರಣ ವೇದಿಕೆಯ ಮುಖಂಡ ಅಂಬಯ್ಯ ಶಾಬಾದಿ, ಶ್ರೀಶೈಲ್ ಗುತ್ತೇದಾರ, ನ್ಯಾಯವಾದಿ ದತ್ತು ಕಾಮಲೇಕರ, ಸುಭಾಷ, ಚವ್ಹಾಣ್ಇದ್ದರು.
ಗೆಳೆಯರ ಬಳಗ: ಬಸವೇಶ್ವರ ನಗರದ ಗೆಳೆಯರ ಬಳಗದ ವತಿಯಿಂದ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ವೆಂಕಟರೆಡ್ಡಿ ಅಬ್ಬೆತುಮಕೂರ, ರಮೇಶ ದೊಡ್ಡಮನಿ, ಚಂದ್ರಕಾಂತ ಲೇವಡಿ, ಕೃಷ್ಣಾ ಬಬಲಾದ, ಸಿದ್ದು ಆಡಿಕಿ, ಯಲ್ಲಾರೆಡ್ಡಿ ಪಾಟೀಲ ಇದ್ದರು.
ಆದರ್ಶ ಪದವಿ ಮಹಾವಿದ್ಯಾಲಯ: ನಗರದ ಆದರ್ಶ ಪದವಿ ಕಾಲೇಜು ಆವರಣದಲ್ಲಿ ಸಂಸ್ಥೆ ಅಧ್ಯಕ್ಷ ನರಸಪ್ಪ ಬೆಟ್ಟದ ನೇತೃತ್ವದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಯಲ್ಹೇರಿ ಅಭಿವೃದ್ಧಿ ಅಧಿಕಾರಿ ಕಲ್ಯಾಣ ಕುಮಾರ, ಶರಣಗೌಡ ಶಿವರಾಯ ಯಲ್ಹೇರಿ, ಜಯಪ್ರಕಾಶ ಗೌಡ, ದೇವೀಂದ್ರಪ್ಪ ಕೆ., ಪ್ರಾಚಾರ್ಯ ಬನ್ನಪ್ಪ ತಡಿಬಿಡಿ, ಉಪನ್ಯಾಸಕ ವಿಶ್ವನಾಥ, ಸಾಬರೆಡ್ಡಿ ಮುದ್ನಾಳ, ಮಲ್ಲಿಕಾರ್ಜುನ, ಕಾಶಿನಾಥ ಮಣ್ಣೂರಕರ್, ರವಿಕಾಂತ ಕಸಬಿ, ನಾಗೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.