ಹಳ್ಳೆಪ್ಪ ಪೂಜಾರಿ
ಯಾದಗಿರಿ: ತಾಲ್ಲೂಕಿನ ಶೆಟ್ಟಿಕೇರಾ ಗ್ರಾಮದಲ್ಲಿ ಮೊಹರಂ ಅಗ್ನಿ ಕುಂಡ ತುಳಿದು ಕೆಲವೇ ಗಂಟೆಗಳಲ್ಲಿ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಳ್ಳೆಪ್ಪ ಪೂಜಾರಿ (44) ಮೃತ ವ್ಯಕ್ತಿ.
‘ಗ್ರಾಮದಲ್ಲಿ ಮೊಹರಂ ಅಂಗವಾಗಿ ಅಲಾಯಿ ಕುಣಿತ ಇತ್ತು. ಇದರಲ್ಲಿ ಹಳ್ಳೆಪ್ಪ ಪೂಜಾರಿಕೆ ಮಾಡುತ್ತಿದ್ದರು. ಹೃದಯಾಘಾತದ ನಂತರ ತುರ್ತು ಚಿಕಿತ್ಸೆ ಸಿಗದಿದ್ದಕ್ಕೆ ಹಳ್ಳೆಪ್ಪ ಪೂಜಾರಿ ಮೃತಪಟ್ಟಿದ್ದಾರೆ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.