ADVERTISEMENT

ಲೆಕ್ಕ ಪರಿಶೋಧಕಿ ಆಗುವೆ: ವಾಣಿಜ್ಯ ವಿಭಾಗದ 3ನೇ ಟಾಪರ್ ಪ್ರಜ್ಞಾ ಸತೀಶ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 11:57 IST
Last Updated 15 ಏಪ್ರಿಲ್ 2019, 11:57 IST
ಪ್ರಜ್ಞಾ ಸತೀಶ್‌ ಅವರಿಗೆ ತಾಯಿ ಚೇತನಾ ಮುತ್ತಿಟ್ಟ ಕ್ಷಣ
ಪ್ರಜ್ಞಾ ಸತೀಶ್‌ ಅವರಿಗೆ ತಾಯಿ ಚೇತನಾ ಮುತ್ತಿಟ್ಟ ಕ್ಷಣ   

ತುಮಕೂರು:‘ಪೋಷಕರು, ಶಿಕ್ಷಕರು, ಕಾಲೇಜಿನ ಆಡಳಿತ ಮಂಡಳಿ ಸಹಕಾರ ಸಾಧನೆಗೆ ಪೂರಕವಾಗಿದೆ. ನಿರೀಕ್ಷೆಯಂತೆಯೇ ಫಲಿತಾಂಶ ಲಭಿಸಿದೆ’–

ಇದುವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅಂಕಗಳಿಸಿ ರಾಜ್ಯಕ್ಕೆ 3ನೇ ಟಾಪರ್ ಆಗಿರುವನಗರದ ವಿದ್ಯಾವಾಹಿನಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಸತೀಶ್ ಅವರ ಸಂತಸದ ನುಡಿ.

ವಾಣಿಜ್ಯ ಕೋರ್ಸ್ ಅಧ್ಯಯನ ನನಗೆ ಇಷ್ಟವಿತ್ತು. ಹೀಗಾಗಿ ಕಾಮರ್ಸ್ ಪ್ರವೇಶ ಪಡೆದು ಶ್ರಮ ಪಟ್ಟಿದ್ದಕ್ಕೆ ಹೆಚ್ಚು ಅಂಕಗಳು ಲಭಿಸಿವೆ. ಇದೇ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪೂರೈಸಿ ಭವಿಷ್ಯದಲ್ಲಿ ಲೆಕ್ಕಪರಿಶೋಧಕಿ ಆಗುವ ಆಸೆ ಇದೆ ಎಂದು ಪ್ರಜ್ಞಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಒಬ್ಬ ಮಗಳು ಎಂಜಿನಿಯರ್ ಇದ್ದಾಳೆ. ಇವಳು ಕಾಮರ್ಸ್ ಮಾಡುತ್ತೇನೆ ಎಂದು ಇಷ್ಟಪಟ್ಟು ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಳು. ಇಷ್ಟದಂತೆ ಓದಿ ಹೆಚ್ಚು ಅಂಕಗಳಿಸಿದ್ದಾಳೆ. ಅವಳ ಆಸೆಯಂತೆಯೇ ಪ್ರೋತ್ಸಾಹಿಸುತ್ತೇವೆ ಎಂದು ಪ್ರಜ್ಞಾ ತಂದೆ ಹಾಗೂ ಇಂಗ್ಲಿಷ್ ಅಧ್ಯಾಪಕರಾದ ಸತೀಶ್ ಹಾಗೂ ತಾಯಿ ಚೇತನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.