ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ಬಹುಆಯ್ಕೆಯ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 23:32 IST
Last Updated 26 ಮಾರ್ಚ್ 2025, 23:32 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

1. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಪತಂಜಲಿಯನ್ನು ಯೋಗ ತತ್ತ್ವಶಾಸ್ತ್ರದ ಸ್ಥಾಪಕರೆಂದು ಕರೆಯುತ್ತಾರೆ

ADVERTISEMENT

ಬಿ. ಪತಂಜಲಿ ಋಷಿಯು ಯೋಗ ಸೂತ್ರ ಎಂಬ ಗ್ರಂಥವನ್ನು ಬರೆದಿದ್ದಾರೆ

ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು ಡಿ. ಎರಡೂ ಸರಿ

ಉತ್ತರ: ಡಿ

2. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಪ್ರಾಚೀನ ವೈದ್ಯಕೀಯ ಪದ್ಧತಿಗಳ ಆಳವಾದ ಜ್ಞಾನ ಪುನರುಜ್ಜೀವನಗೊಳಿಸುವ ದೃಷ್ಠಿಯಿಂದ 1995ರಲ್ಲಿ ಭಾರತೀಯ ಔಷಧ ಮತ್ತು ಹೋಮಿಯೋಪಥಿ ಇಲಾಖೆ ರಚಿಸಲಾಯಿತು

ಬಿ. ಭಾರತ ಸರ್ಕಾರ 2020ರಲ್ಲಿ ಆಯುಷ್ ಸಚಿವಾಲಯವನ್ನು ರಚಿಸಿದೆ

ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪುಡಿ. ಎರಡೂ ಸರಿ

ಉತ್ತರ: ಎ

3. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಔಷಧೀಯ ಸಸ್ಯಗಳ ವಲಯವನ್ನು ಉತ್ತೇಜಿಸಲು, ಭಾರತ ಸರ್ಕಾರ 24 ನವೆಂಬರ್ 2000 ರಂದು ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ ಸ್ಥಾಪಿಸಿದೆ

ಬಿ. ಪ್ರಸ್ತುತ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯು ಆಯುಷ್ (ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ) ಸಚಿವಾಲಯದಲ್ಲಿದೆ

ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು ಡಿ. ಎರಡೂ ಸರಿ

ಉತ್ತರ: ಡಿ

4. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಜೂನ್ 19ರ, ವಿಶ್ವ ಸಿಕಲ್ ಸೆಲ್ ಜಾಗೃತಿ ದಿನವನ್ನು ಅಧಿಕೃತವಾಗಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಂಗೀಕರಿಸಿದೆ

ಬಿ. 2024 ರ ವಿಶ್ವ ಸಿಕಲ್ ಸೆಲ್ ದಿನದ ಥೀಮ್, ‘Hope Through Progress: Adancing Global Sickle Cell Care & Treatment’

ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು ಡಿ. ಎರಡೂ ಸರಿ

ಉತ್ತರ: ಡಿ

5. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಜೂನ್ 20 ರಂದು ಪ್ರಪಂಚದಾದ್ಯಂತ ನಿರಾಶ್ರಿತರು ಎದುರಿಸುತ್ತಿರುವ ಹೋರಾಟಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಗುತ್ತದೆ

ಬಿ. 2024ರ ವಿಶ್ವ ನಿರಾಶ್ರಿತರ ದಿನದ ಥೀಮ್, ‘For a World Where Refugees Are Welcomed’

ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪುಡಿ. ಎರಡೂ ಸರಿ

ಉತ್ತರ: ಡಿ

6. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಭಾರತೀಯ ನೇವಲ್ ಹೈಡ್ರೋಗ್ರಾಫಿಕ್ ಇಲಾಖೆಯು ಭಾರತದಲ್ಲಿ ಹೈಡ್ರೋಗ್ರಾಫಿಕ್ ಸಮೀಕ್ಷೆಗಳು ಅಥವಾ ಹೈಡ್ರೋಗ್ರಾಫಿಕ್ ಚಾರ್ಟ್ ಅಥವಾ ನಾಟಿಕಲ್ ಚಾರ್ಟ್(Nautical Charting.ಗಳನ್ನು ಪ್ರಕಟಿಸುವ ನೋಡಲ್ ಏಜೆನ್ಸಿಯಾಗಿದೆ.

ಬಿ. ಕೇರಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರೋಗ್ರಫಿ ಸಂಸ್ಥೆಯು ಭಾರತದಲ್ಲಿ ಹೈಡ್ರೋಗ್ರಫಿಯಲ್ಲಿ ತರಬೇತಿ ನೀಡುವ ಕೇಂದ್ರವಾಗಿದೆ.

ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು ಡಿ. ಎರಡೂ ಸರಿ

ಉತ್ತರ: ಎ

7. ಕೆಳಗಿನ ಯಾವ ಕಾರಣಗಳಿಂದ ಜರ್ಮನಿಯಲ್ಲಿ ನಾಜಿ ಸರ್ಕಾರ ಅಧಿಕಾರಕ್ಕೆ ಬರುವಂತಾಯಿತು?

1. ವರ್ಸೈಲ್ಸ್ ಒಪ್ಪಂದದಲ್ಲಿ ಜರ್ಮನಿಯ ಮೇಲೆ ವಿಧಿಸಿದ ನಿರ್ಬಂಧಗಳು

2. 1930 ರ ಆರ್ಥಿಕ ಮುಗ್ಗಟ್ಟು

3. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ನಿರಂಕುಶ ನಾಯಕತ್ವಗಳು ಅಧಿಕಾರದ ಗದ್ದುಗೆ ಏರಿದವು

ಸರಿ ಉತ್ತರ ಗುರುತಿಸಿ

ಎ. 1, 2 ಮತ್ತು 3 ಬಿ. 1 ಮತ್ತು 2

ಸಿ. 1 ಮತ್ತು 3 ಡಿ. 2 ಮತ್ತು 3

ಉತ್ತರ: ಎ

8. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸುದ್ದಿಯಲ್ಲಿದ್ದ ‘Auschwitz’ ಪ್ರದೇಶ ಕೆಳಗಿನ ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?

ಎ. ಜರ್ಮನಿ ಬಿ. ಹಂಗರಿ

ಸಿ. ಪೋಲೆಂಡ್‌ ಡಿ. ಇಟಲಿ

ಉತ್ತರ: ಸಿ

9. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ವಿಶ್ವ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಪ್ರತಿ ವರ್ಷ ಜುಲೈ 3 ರಂದು ಆಚರಿಸಲಾಗುತ್ತದೆ

ಬಿ. ಪ್ಲಾಸ್ಟಿಕ್ ಚೀಲಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ

ಸರಿಯಾದ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು ಡಿ. ಎರಡೂ ಸರಿ

ಉತ್ತರ: ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.