ADVERTISEMENT

ಪ್ರಜಾವಾಣಿ ಕ್ವಿಜ್ 50

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 18 ಡಿಸೆಂಬರ್ 2018, 19:32 IST
Last Updated 18 ಡಿಸೆಂಬರ್ 2018, 19:32 IST

1. ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ದೇಶದ ಮೊದಲ ರಾಜ್ಯ ಯಾವುದು?

ಅ) ಬಿಹಾರ ಆ) ತಮಿಳುನಾಡು ಇ) ಕೇರಳ ಈ) ಕರ್ನಾಟಕ

2. ‘ವಕೀಲರೊಬ್ಬರ ವಗೈರೆಗಳು’ ಯಾರು ಬರೆದ ಕೃತಿ?

ADVERTISEMENT

ಅ) ಸಿ.ಎಸ್. ದ್ವಾರಕಾನಾಥ್ ಆ) ಸಿ.ಎಚ್. ಹನುಮಂತರಾಯ ಇ) ಉದಯ್ ಹೊಳ್ಳ ಈ) ಬಿ.ವಿ. ಆಚಾರ್ಯ

3. ತಮ್ಮ ಅರಸರ ಸಲುವಾಗಿ ಪ್ರಾಣಾರ್ಪಣೆ ಮಾಡುತ್ತಿದ್ದ ವೀರರಿಗೆ ಏನೆಂದು ಹೆಸರಿತ್ತು?

ಅ) ಗರುಡರು ಆ) ನಾಗರು ಇ) ರಕ್ಷಕರು ಈ) ಕೇಸರಿಗಳು

4. ಜರಡಿಯ ಮೂಲಕ ಚಂದ್ರನನ್ನು ನೋಡಿ ಉಪವಾಸ ಪೂರ್ಣಗೊಳಿಸುವ ಉತ್ತರ ಭಾರತದ ಹಬ್ಬ ಯಾವುದು?

ಅ) ಬೈಸಾಖಿ ಆ) ಲೋರಿ ಇ) ಹೋಲಿ ಈ) ಕರವಾ ಚೌತ್

5. ‌ಶಾಸ್ತ್ರೀಯ ಗಾಯನಕ್ಕೂ ಹೆಸರಾಗಿದ್ದ ಕನ್ನಡದ ಚಲನಚಿತ್ರ ಹಾಸ್ಯನಟ ಯಾರು?

ಅ) ಮುಸುರಿ ಕೃಷ್ಣಮೂರ್ತಿ ಆ) ದ್ವಾರಕೀಶ್ ಇ) ಧೀರೇಂದ್ರ ಗೋಪಾಲ್ ಈ) ದಿನೇಶ್

6. ಇವುಗಳಲ್ಲಿ ಯಾವುದು ‘ಚಾರ್ ಧಾಮ್’ಗಳಲ್ಲಿ ಸೇರಿಲ್ಲ ?

ಅ) ಗಂಗೋತ್ರಿ ಆ) ಯಮುನೋತ್ರಿ ಇ) ಬದರಿನಾಥ್ ಈ) ವಾರಣಾಸಿ

7. ಚಿಪ್ಕೋ ಚಳವಳಿ ನಡೆದದ್ದು ಯಾವುದರ ಸಂರಕ್ಷಣೆಗಾಗಿ?

ಅ) ಜಲ ಆ) ನೆಲ ಇ) ಮರಗಳು ಈ) ಸ್ಮಾರಕಗಳು

8) ಬತ್ತದ ಗದ್ದೆಗಳು ಮತ್ತು ಜೌಗು ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಅನಿಲ ಯಾವುದು?

ಅ) ಸಾರಜನಕ ಆ) ಇಂಗಾಲದ ಡೈ ಆಕ್ಸೈಡ್‌ ಇ) ಜಲಜನಕ ಈ) ಮೀಥೇನ್

9. ಬೀಚ್ ವಾಲಿಬಾಲ್‌ನಲ್ಲಿ ಪ್ರತಿ ತಂಡದಲ್ಲಿ ಎಷ್ಟು ಆಟಗಾರರಿರುತ್ತಾರೆ?

ಅ) ಇಬ್ಬರು ಆ) ಆರು ಇ) ಎಂಟು ಈ) ನಾಲ್ಕು

10. ‘ಕಿರಾತಾರ್ಜುನೀಯಂ’ ಕೃತಿಯನ್ನು ರಚಿಸಿದ ಸಂಸ್ಕೃತಕವಿ ಯಾರು?

ಅ) ಭಾಸ ಆ) ಭಾರವಿ ಇ) ಭಟ್ಟನಾರಾಯಣ ಈ) ವರರುಚಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಗಾಂಧೀಜಿ 2. ಹತ್ತು 3. ಇಟಲಿ 4. ಸಾರಜನಕ 5. ಮಧ್ಯಪ್ರದೇಶ

6. ಏಟ್ಸ್ 7. ಲಕ್ಷದ್ವೀಪ 8. ಸಿ.ಎಸ್. ಜಯರಾಮನ್ 9. ಸಮುದ್ರಮಟ್ಟದಲ್ಲಿ 10. ಎಜಾಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.