ADVERTISEMENT

ಎನ್‌.ಡಿ.ತಿವಾರಿ ಸ್ಪರ್ಧೆ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಲಖನೌ (ಐಎಎನ್‌ಎಸ್‌): ಕಾಂಗ್ರೆಸ್‌ನ ಹಿರಿಯ ಮುಖಂಡ ಎನ್‌.ಡಿ.ತಿವಾರಿ (88) ಅವರು ನೈನಿತಾಲ್‌ ಲೊಕಸಭೆ ಕ್ಷೇತ್ರ­ದಿಂದ ಸ್ಪರ್ಧಿಸುವುದಿಲ್ಲ ಎಂದು ಅವರ ಆಪ್ತ ವಲಯ ತಿಳಿಸಿದೆ.

ತಮಗೆ ಕೊನೆಯ ಅವಕಾಶ ನೀಡುವಂತೆ ಕೇಳಿದ್ದ ತಿವಾರಿ, ಇತ್ತೀಚೆಗೆ ತಾವು ಮಗ ಎಂದು ಒಪ್ಪಿಕೊಂಡಿರುವ ರೋಹಿತ್‌ ಶೇಖರ್‌ ಅವರಿಗೂ ಯಾವುದಾದರೂ ಕ್ಷೇತ್ರದಿಂದ ಟಿಕೆಟ್‌ ನೀಡಲು ಪಕ್ಷದ ಮುಖಂಡರಲ್ಲಿ ಕೇಳಿದ್ದರು. ಆದರೆ ಇದಕ್ಕೆ ಪಕ್ಷ ಮನ್ನಣೆ ನೀಡಲಿಲ್ಲ ಎಂದು ತಿಳಿದುಬಂದಿದೆ.

‘ಜೀವನ ಪರ್ಯಂತ ಸೇವೆ ಸಲ್ಲಿಸಿದ ಪಕ್ಷದಿಂದ ನನಗೆ ಅನ್ಯಾಯ ಆಗಿದೆಯೇ ಇಲ್ಲವೇ ಎಂಬುದನ್ನು ಉತ್ತರಾಖಂಡದ  ಜನರೇ ನಿರ್ಧರಿಸುತ್ತಾರೆ. ಯಾರು ತಮ್ಮ ಪ್ರತಿನಿಧಿ ಆಗಬೇಕು ಎಂಬುದು ಅವರಿಗೆ ತಿಳಿದಿದೆ’ ಎಂದು ತಿವಾರಿ ಅವರು ಮಂಗಳವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.