ADVERTISEMENT

ಎನ್‌ಸಿಪಿಯಿಂದ ಮೀಸಲಾತಿ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2014, 19:30 IST
Last Updated 7 ಏಪ್ರಿಲ್ 2014, 19:30 IST

ಮುಂಬೈ (ಪಿಟಿಐ): ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ  ಲೋಕಸಭಾ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಮರಾಠಾ ಮತ್ತು ಮುಸ್ಲಿಮರಿಗೆ ಮೀಸಲಾತಿ, ರಾಜೀಂದರ್‌ ಸಾಚಾರ್ ವರದಿ ಅನುಷ್ಠಾನ, ಅಂಡಮಾನ್‌ ಮತ್ತು ನಿಕೋಬಾರ್‌ಗಳಿಗೆ ರಾಜ್ಯ ಸ್ಥಾನಮಾನ ಮುಂತಾದ ಭರವಸೆಗಳನ್ನು ನೀಡಿದೆ.

ಕೃಷಿ ಪ್ರಗತಿಗಾಗಿ ಕೃಷಿ ಖಾಸಗೀಕರಣ, ಬೆಲೆ ರಕ್ಷಣೆ ಮುಂತಾದ ಕ್ರಮಗಳನ್ನೂ ಕೈಗೊಳ್ಳುವುದಾಗಿ ಹೇಳಲಾಗಿದೆ. ಯುಪಿಎ ಭಾಗವಾಗಿರುವ ಎನ್‌ಸಿಪಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಜೊತೆಗೆ ಮೈತ್ರಿ ಹೊಂದಿದೆ. ಮೇಘಾಲಯ, ಅರು­ಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್‌, ಗುಜರಾತ್‌, ಕೇರಳ ಮತ್ತು ಒಡಿಶಾಗಳಲ್ಲಿಯೂ ಪಕ್ಷ ಅಸ್ತಿತ್ವ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.