ADVERTISEMENT

ಗೋ ರಕ್ಷಣೆಗಾಗಿ ಅರ್ಚಕ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST

ಮಥುರಾ (ಪಿಟಿಐ): ಅರ್ಚಕ ವೃತ್ತಿಯಲ್ಲಿರುವ ಫಕ್ಕಾದ್‌ ಬಾಬಾ ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಧಾರ್ಮಿಕ ಅನಿವಾರ್ಯತೆ!
ಗೋ ರಕ್ಷಣೆ ಉದ್ದೇಶ ಹೊಂದಿ­-ರುವ 69 ವರ್ಷದ ಬಾಬಾ ಅವರು ಇಲ್ಲಿನ ಗಲ್ತೇಶ್ವರ ದೇವಾಲಯ­ದಲ್ಲಿ ಪುರೋಹಿತ­ರಾಗಿದ್ದಾರೆ.

‘ಗೋ ಭಕ್ತ’ನಿಂದ ಮಾತ್ರ ಗೋ ಹತ್ಯೆ ತಡೆಯಲು ಸಾಧ್ಯ ಎಂಬ ತಮ್ಮ ಗುರುಗಳ ಸಲಹೆಯ ಮೇರೆಗೆ ಬಾಬಾ ಅವರು ವಿಧಾನಸಭೆ ಮತ್ತು ಲೋಕ­ಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾ ಬಂದಿದ್ದಾರೆ. ಇದುವರೆಗೆ ಅವರು 15 ಚುನಾವಣೆಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದಾರೆ.
ಈ ಬಾರಿಯೂ ಬಾಬಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.