ADVERTISEMENT

ಶಾಜಿಯಾ ಇಲ್ಮಿಯತ್ತ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2014, 19:30 IST
Last Updated 14 ಏಪ್ರಿಲ್ 2014, 19:30 IST

ನೀಮುಚ್‌, ಮಧ್ಯ ಪ್ರದೇಶ (ಪಿಟಿಐ): ಆಮ್‌ ಆದ್ಮಿ ಪಕ್ಷದ ನಾಯಕಿ ಶಾಜಿಯಾ ಇಲ್ಮಿ ಅವರು ಭಾಗವಹಿಸಿದ್ದ ರ್‍್ಯಾಲಿಯ ವೇದಿಕೆಯತ್ತ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಪರವಾಗಿ ಘೋಷಣೆ ಕೂಗುತ್ತಾ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಿದ ಘಟನೆ ಸೋಮವಾರ ನಡೆದಿದೆ.

ಮಂಡ್‌ಸೌರ್‌–ನೀಮುಚ್ ಕ್ಷೇತ್ರದ ಎಎಪಿ ಅಭ್ಯರ್ಥಿ ಪರಾಸ್‌ ಸಕ್ಲೇಚಾ ಪರವಾಗಿ ಇಲ್ಮಿ ರ್‍್ಯಾಲಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಇಲ್ಮಿ ಅವರು ತಮ್ಮ ಭಾಷಣದಲ್ಲಿ ಮೋದಿ ಅವರನ್ನು ಟೀಕಿಸಲು ಆರಂಭಿ­ಸುತ್ತಿದ್ದಂತೆಯೇ ಅಪರಿಚಿತರು ಮೋದಿ ಪರ ಘೋಷಣೆಗಳನ್ನು ಕೂಗಿದರು. ಮಾತ್ರವಲ್ಲದೇ ವೇದಿಕೆಯತ್ತ ಕಲ್ಲು ತೂರಿದರು. ಇದರಿಂದಾಗಿ ಅವರು ಭಾಷಣ ಮೊಟಕು­ಗೊಳಿಸಬೇಕಾಯಿತು.

ಘಟನೆ ನಂತರ ಎಎಪಿ ಕಾರ್ಯಕರ್ತರು ಹಾಗೂ ಪೊಲೀಸರು ಕಲ್ಲು ತೂರಾಟ ನಡೆಸಿದವರನ್ನು ಬೆನ್ನಟ್ಟಲು ಯತ್ನಿಸಿದರಾದರೂ, ಅವರು ಅಲ್ಲಿಂದ ಪರಾರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.