ADVERTISEMENT

ಕಾಂಗ್ರೆಸ್‌ನಲ್ಲಿ ಗುಲಾಮಗಿರಿ ಜೀವಂತ: ಮಹಿಮ ಟೀಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ದಾವಣಗೆರೆ: ‘ಕಾಂಗ್ರೆಸ್‌ನಲ್ಲಿ ಗುಲಾಮ­­­ಗಿರಿ ಸಂಸ್ಕೃತಿ ಇನ್ನೂ ಜೀವಂತ­­ವಾಗಿದ್ದು, ಎಲ್ಲದಕ್ಕೂ ವರಿ­ಷ್ಠರ ಮನೆಯ ಬಾಗಿಲು ಕಾಯುವ ಪರಿಸ್ಥಿತಿಯಿದೆ’ ಎಂದು ಜೆಡಿಎಸ್‌ ಅಭ್ಯರ್ಥಿ ಮಹಿಮ ಪಟೇಲ್‌ ಆಪಾದಿಸಿದರು.

ಕಾಂಗ್ರೆಸ್‌ನಿಂದ ಜೆಡಿಎಸ್‌ ಸೇರಿ ಆ ಪಕ್ಷದಿಂದ ಚುನಾವಣೆಗೆ ಬಿ–ಫಾರಂ ಪಡೆದ ಮಹಿಮ ಭಾನು­ವಾರ ನಗರದಲ್ಲಿ ನಡೆದ ಕಾರ್ಯ­ಕರ್ತರ  ಸಭೆಯಲ್ಲಿ ಮಾತನಾಡಿ­ದರು.

‘ಜೆಡಿಎಸ್‌ನದ್ದು ಕುಟುಂಬ ರಾಜ­ಕಾರಣ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ನಮ್ಮದು ಕುಟುಂಬ ರಾಜ­ಕಾರಣವೇ. ಇಡೀ ರಾಜ್ಯವನ್ನು ಎಚ್‌.ಡಿ.ಕುಮಾರಸ್ವಾಮಿ ಒಟ್ಟಾಗಿ ತೆಗೆದು­ಕೊಂಡು ಹೋಗುವ ಮೂಲಕ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು. ‘ಈ ಚುನಾವಣೆಯಲ್ಲಿ ಹಣ, ಜಾತಿ ಬಲ ನಡೆಯು­ವುದಿಲ್ಲ. ಹಣ ಕೊಟ್ಟು ಮತದಾರರ ಖರೀದಿ ಮಾಡಲು ಅಸಾಧ್ಯ. ರಾಜ್ಯದಲ್ಲಿ ಜೆಡಿಎಸ್‌ ಸುಂಟರಗಾಳಿಗೆ ಕಾಂಗ್ರೆಸ್‌, ಬಿಜೆಪಿ ಹಾರಿ ಹೋಗಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT