ADVERTISEMENT

ತಿಪಟೂರು | ಬಿ.ಸಿ. ನಾಗೇಶ್‌ ನಾಮಪತ್ರ ಸಲ್ಲಿಕೆ: ನೀತಿ ಸಂಹಿತೆ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 11:28 IST
Last Updated 19 ಏಪ್ರಿಲ್ 2023, 11:28 IST
   

ತಿಪಟೂರು: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ. ನಾಗೇಶ್‌ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಚುನಾವಣಾ ಅಧಿಕಾರಿ ಕಚೇರಿಯ 100 ಮೀಟರ್‌ ಒಳಗಡೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ, ನಾಗೇಶ್‌ ಅವರ 4 ಕಾರುಗಳನ್ನು ಡಿವೈಎಸ್‌ಪಿ ಸಿದ್ದಾರ್ಥ್ ಗೊಯಲ್ ಚುನಾವಣಾ ಅಧಿಕಾರಿಯ ಕಚೇರಿಯ ಹತ್ತಿರಕ್ಕೆ ಬಿಟ್ಟಿದ್ದಾರೆ.

ಬಿ.ಸಿ. ನಾಗೇಶ್ ಬೆಂಬಲಿಗರ ಕಾರು, ಜೆ.ಸಿ. ಮಾಧುಸ್ವಾಮಿ, ನೆ.ಲ. ನರೇಂದ್ರಬಾಬು ಹಾಗೂ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಅವರಿದ್ದ ಕಾರುಗಳನ್ನು ಒಳಗೆ ಬಿಟ್ಟು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.