ADVERTISEMENT

ಬೆಂಗಳೂರು | ಪದ್ಮನಾಭ ನಗರದಲ್ಲಿ ಸತತ 7ನೇ ಬಾರಿ ಗೆದ್ದ ಆರ್. ಅಶೋಕ್

​ಪ್ರಜಾವಾಣಿ ವಾರ್ತೆ
Published 13 ಮೇ 2023, 7:53 IST
Last Updated 13 ಮೇ 2023, 7:53 IST
ಸಚಿವ ಆರ್. ಅಶೋಕ್
ಸಚಿವ ಆರ್. ಅಶೋಕ್   

ಬೆಂಗಳೂರು: ಎರಡು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆರ್. ಅಶೋಕ್ ಭಾರಿ ಮತಗಳ ಅಂತರದಿಂದ ಪದ್ಮನಾಭನಗರದಲ್ಲಿ ಗೆಲವು ಸಾಧಿಸಿದ್ದಾರೆ. 

ಡಿ.ಕೆ.ಶಿವಕುಮಾರ್ ವಿರುದ್ಧ ಕನಕಪುರದಲ್ಲಿ ಪರಾಭವ ಅನುಭವಿಸಿರುವ ಅವರು, ಪದ್ಮನಾಭನಗರದಲ್ಲಿ ಕಾಂಗ್ರೆಸ್‌ನ ವಿ. ರಘುನಾಥ್ ನಾಯ್ಡು ವಿರುದ್ಧ 46,718 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆರ್. ಅಶೋಕ್ 68,305 ಮತಗಳಿಸಿದರೆ, ರಘುನಾಥ್ ನಾಯ್ಡು 21,587 ಮತ ಪಡೆದಿದ್ದಾರೆ. 

ಆರ್. ಅಶೋಕ್ ಪದ್ಮನಾಭನಗರದಲ್ಲಿ ಸತತ 7ನೇ ಬಾರಿ ಗೆಲುವು ಸಾಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.