ADVERTISEMENT

ಬಚ್ಚೇಗೌಡರಿಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 13:21 IST
Last Updated 13 ಏಪ್ರಿಲ್ 2019, 13:21 IST
ಬಿಜೆಪಿಗೆ ಬೆಂಬಲ ಸೂಚಿಸಿದ ಮುಸ್ಲಿಂ ನಾಯಕರು
ಬಿಜೆಪಿಗೆ ಬೆಂಬಲ ಸೂಚಿಸಿದ ಮುಸ್ಲಿಂ ನಾಯಕರು   

ಹೊಸಕೋಟೆ: ‘ಬಚ್ಚೇಗೌಡರ ರಾಜಕೀಯ ಜೀವನದಲ್ಲಿ ಅವರು ಯಾವತ್ತೂ ಮುಸ್ಲಿಂ ಜನಾಂಗಕ್ಕೆ ಮೋಸ ಮಾಡಿಲ್ಲ. ಆದರೆ ಕಳೆದ ಚುನಾವಣೆಗಳಲ್ಲಿ ನಾವೇ ಸರಿಯಾದ ರೀತಿಯಲ್ಲಿ ಸಹಕಾರ ನೀಡದೆ ಅವರ ಸೋಲಿಗೆ ಕಾರಣವಾಗಿದ್ದೇವೆ. ಹಾಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಬಚ್ಚೇಗೌಡರ ಗೆಲುವಿಗೆ ಶ್ರಮಿಸುತ್ತೇವೆ’ ಎಂದು ಮುಸ್ಲಿಂ ಸಮುದಾಯದ ಪರವಾಗಿ ನಿಸಾರ್ ತಿಳಿಸಿದರು.

‘ಬಿಜೆಪಿ ಮುಸ್ಲಿಂ ವಿರೋಧಿಯೆಂದು ದೇಶದಲ್ಲಿ ಕಾಂಗ್ರೆಸ್ ಬಿಂಬಿಸುತ್ತಿದೆ. ಆದರೆ ಹೊಸಕೋಟೆಯಲ್ಲಿ ಬಚ್ಚೇಗೌಡರು ಎಂದೂ ಆ ರೀತಿ ನಡೆದುಕೊಂಡಿಲ್ಲ. ಅವರ ಮಗ ಶರತ್ ಬಚ್ಚೇಗೌಡರು ಸಹ ನಮ್ಮ ಜೊತೆಯಲ್ಲಿ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಹಾಗಾಗಿ ನಾವು ಚಿಕ್ಕಬಳ್ಳಾಪುರ ಕ್ಷೇತ್ರದ ಹಾಗೂ ಇಡೀ ರಾಜ್ಯದ ಮುಸ್ಲಿಂ ಬಾಂಧವರನ್ನು ಬಿಜೆಪಿಗೆ ಮತ ಹಾಕಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲು ಸಹಕರಿಸಿ’ ಎಂದು ಕೋರಿದರು.

ಅವರೊಂದಿಗೆ ಇಂತಿಯಾಜ್ ಪಾಶ, ರಿಜ್ವಾನ್, ನಿಸಾರ್ ಅಹಮದ್ ಮುಂತಾದವರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.