ADVERTISEMENT

ಕಾಂಗ್ರೆಸ್‌ನಿಂದ ಧರ್ಮಾಧಾರಿತ ಮತಯಾಚನೆ: ‘ಸುಪ್ರೀಂ’ಗೆ ಮುತಾಲಿಕ್‌ ರಿಟ್‌ ಅರ್ಜಿ

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಕಾಂಗ್ರೆಸ್‌ನಿಂದ ಧರ್ಮಾಧಾರಿತ ಮತಯಾಚನೆ: ‘ಸುಪ್ರೀಂ’ಗೆ ಮುತಾಲಿಕ್‌ ರಿಟ್‌ ಅರ್ಜಿ
ಕಾಂಗ್ರೆಸ್‌ನಿಂದ ಧರ್ಮಾಧಾರಿತ ಮತಯಾಚನೆ: ‘ಸುಪ್ರೀಂ’ಗೆ ಮುತಾಲಿಕ್‌ ರಿಟ್‌ ಅರ್ಜಿ   

ನವದೆಹಲಿ: ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಧರ್ಮಾಧಾರಿತ ಮತ ಯಾಚನೆಯಲ್ಲಿ ತೊಡಗಿದೆ ಎಂದು ದೂರಿ, ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಪಕ್ಷವು ಏಪ್ರಿಲ್‌ 27ರಂದು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ, ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ವಿಶಿಷ್ಟ ಸೌಲಭ್ಯ ನೀಡುವುದಾಗಿ ಘೋಷಿಸಿದೆ. ಕೂಡಲೇ ಪ್ರಣಾಳಿಕೆಯಲ್ಲಿನ ಈ ಅಂಶವನ್ನು ತೆಗೆದುಹಾಕಲು ಪಕ್ಷಕ್ಕೆ ಸೂಚಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.

ಈ ಮೂಲಕ ಕಾಂಗ್ರೆಸ್ ಪಕ್ಷವು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (3) ಅನ್ನು ಉಲ್ಲಂಘಿಸಿದೆ ಎಂದು ದೂರಿರುವ ಪ್ರಮೋದ್‌ ಮುತಾಲಿಕ್, ಈ ಕುರಿತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.