ಬೆಂಗಳೂರು: ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ಅವರ ಭಾವಚಿತ್ರವಿರುವ ಕುಕ್ಕರ್ ಬಾಕ್ಸ್ಗಳನ್ನು ಹಗದೂರು ವಾರ್ಡ್ನಲ್ಲಿ ವಿತರಿಸಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
‘ಇಲ್ಲಿನ ಗಾಂಧಿಪುರ ಹಾಗೂ ವಿಜಯನಗರದ ಕೊಳೆಗೇರಿಗಳಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಎಸ್.ಉದಯಕುಮಾರ್ ಅವರು ಕುಕ್ಕರ್
ಗಳನ್ನು ವಿತರಿಸಿದ್ದಾರೆ. ಈ ಹಿಂದೆಯೂ ಕುಕ್ಕರ್ ಹಾಗೂ ಸೀರೆಗಳನ್ನು ವಿತರಿಸಲಾಗಿತ್ತು’ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು.
‘ಈ ಬಾಕ್ಸ್ಗಳ ಮೇಲೆ ಕಾಂಗ್ರೆಸ್ಗೆ ಮತ ನೀಡಿ, ಮಹದೇವಪುರ ಉಳಿಸಿ ಎಂಬ ವಾಕ್ಯವನ್ನು ಮುದ್ರಿಸಲಾಗಿದೆ. ಇಮ್ಮಡಿಹಳ್ಳಿ, ನಾಗೊಂಡನಹಳ್ಳಿಯಲ್ಲೂ ಮತದಾರರಿಗೆ ಆಮಿಷ ತೋರಿಸಲಾಗುತ್ತಿದೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.