ಶಶಿಕಲಾಗೆ ವಿಐಪಿ ಆತಿಥ್ಯ ನೀಡುತ್ತಿದ್ದುದನ್ನು ಮೊದಲು ಹೊರಗೆಡವಿದ ಡಿ.ರೂಪಾ ಅವರಿಗೆ ಸಿದ್ದು ವರ್ಗಾವಣೆಯ ಶಿಕ್ಷೆ ವಿಧಿಸಿದರು. ಆದರೀಗ, ಇಂತಹ ಆತಿಥ್ಯ ನೀಡಲು ಮುಖ್ಯಮಂತ್ರಿಯಿಂದ ಸ್ಪಷ್ಟ ಸೂಚನೆಯಿತ್ತು ಎಂದು ಕಾರಾಗೃಹಗಳ ನಿವೃತ್ತ ಡಿಜಿಪಿಯೇ ಒಪ್ಪಿಕೊಂಡಿದ್ದಾರೆ. ಈ ಸೇವೆಗಾಗಿ ಎಷ್ಟು ಹಣ ಪಡೆದಿರಿ ಮುಖ್ಯಮಂತ್ರಿಗಳೇ?
–ಬಿಜೆಪಿ ಕರ್ನಾಟಕ
ಜೈಲಿನಲ್ಲಿರುವ ಶಶಿಕಲಾ ಅಂತಹವರಿಗೆ ಸೌಲಭ್ಯಗಳನ್ನು ಒದಗಿಸುವ ಕಾರ್ಯದಲ್ಲಿ ಮುಳುಗಿಹೋಗಿರುವ ಪೊಲೀಸರಿಗೆ, ಭ್ರಷ್ಟಾಚಾರ ವಿರೋಧಿ ನ್ಯಾಯಮೂರ್ತಿಗಳಂತಹ ಲೋಕಾಯುಕ್ತರಿಗೆ ಭದ್ರತೆ ಒದಗಿಸಲು ಸಮಯವಾದರೂ ಎಲ್ಲಿರುತ್ತದೆ?
ಅವಿನಾಶ್, @avinashbhat01
ಕರ್ನಾಟಕದ ಬಿಜೆಪಿಯವರು ಎಷ್ಟು ಅಸಮರ್ಥರೆಂದರೆ, ಶಾಂತಿಯುತ, ಸಮದ್ಧ ರಾಜ್ಯದಂಥ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಸಲಹೆ ಪಡೆದುಕೊಳ್ಳಲು, ಕಾನೂನು ವ್ಯವಸ್ಥೆ ಅತ್ಯಂತ ಹದಗೆಟ್ಟಿರುವ ರಾಜ್ಯವನ್ನು ಆಳುತ್ತಿರುವ ಆದಿತ್ಯನಾಥ ಅವರನ್ನು ಕರೆಸಿಕೊಳ್ಳುತ್ತಾರೆ. ಬೇರೆ ಯಾವ ಸಮರ್ಥ ನಾಯಕರೂ ಅವರಿಗೆ ಸಿಗಲಿಲ್ಲವೇ? #ಬರೀ ಓಳು ಬಿಜೆಪಿ
ಕರ್ನಾಟಕ ಕಾಂಗ್ರೆಸ್
ಈ ದೇಶವನ್ನು ಕಳೆದ ವರ್ಷಗಳು ಕಾಂಗ್ರೆಸ್ ಪಕ್ಷದ ಬದಲಾಗಿ ಆರ್ಎಸ್ಎಸ್ ಆಳಿದ್ದರೆ ಭಾರತ ಮತ್ತೊಂದು ಪಾಕಿಸ್ತಾನ ಆಗಿರುತ್ತಿತ್ತು...
ಆನಂದ್ ರಾಮಣ್ಣ, @anandramanna
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.