ಬೆಂಗಳೂರು: ರಾಜ್ಯದ ಗದ್ದುಗೆ ಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ, ಎಲ್ಲ ಜಿಲ್ಲೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತಂದು ಭಾಷಣ ಮಾಡಿಸುವಂತೆ ಕೇಂದ್ರ ಕಚೇರಿಗೆ ಪ್ರಸ್ತಾವ ಕಳುಹಿಸಿದೆ.
ಸದ್ಯಕ್ಕೆ ಪ್ರಧಾನಿ ಭಾಗವಹಿಸುವ ನಾಲ್ಕು ಕಾರ್ಯಕ್ರಮಗಳು ಮಾತ್ರ ಖಚಿತವಾಗಿವೆ. ಈ ತಿಂಗಳು 19ಕ್ಕೆ ಮೈಸೂರು ಹಾಗೂ 27ಕ್ಕೆ ದಾವಣಗೆರೆಗೆ ಅವರು ಭೇಟಿ ನೀಡಲಿದ್ದಾರೆ. ಮಾರ್ಚ್ 4ರಂದು ವಿಜಯಪುರ ಹಾಗೂ 13ರಂದು ರಾಯಚೂರಿಗೆ ಆಗಮಿಸಲಿದ್ದಾರೆ.
‘15ರಿಂದ 20 ಕಡೆಗಳಲ್ಲಿ ಪ್ರಧಾನಿ ಭಾಷಣ ಮಾಡಲು ಒಪ್ಪಿಗೆ ಕೊಡುವ ಸಾಧ್ಯತೆಯಿದೆ’ ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.