‘ಪಾದರಸ’ ಚಿತ್ರಕ್ಕಾಗಿ ‘ಅಪರೂಪವಾದ ನಿನ್ನ ನೋಡಿ ನೋಡಿ ಅನುರಾಗಿಯಾದರೆ ನಿಜಕ್ಕೂ ಕಾರಣ ಯಾರು’ ಹಾಡಿನ ಚಿತ್ರೀಕರಣ ನಡೆಯಿತು. ಇದನ್ನು ರಚಿಸಿದವರು ಸಾಹಿತಿ ಜಯಂತ್ ಕಾಯ್ಕಿಣಿ. ಕೇರಳದ ಕೆಲವು ಸ್ಥಳಗಳಲ್ಲಿ ಇದರ ಚಿತ್ರೀಕರಣ ನಡೆದಿದೆ.
ಈ ಚಿತ್ರದ ನಿರ್ದೇಶನ ಹೃಷಿಕೇಶ್ ಜಂಬಗಿ ಅವರದ್ದು. ಸಂಗೀತ ನೀಡಿರುವವರು ಎ.ಟಿ. ರವೀಶ್.
ಸಂಚಾರಿ ವಿಜಯ್, ನಿರಂಜನ್ ದೇಶಪಾಂಡೆ, ವೈಷ್ಣವಿ ಮೆನನ್, ಮನಸ್ವಿನಿ, ಜೈಜಗದೀಶ್, ಗುರುದತ್ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.