ಗಣೇಶ್ ನಾಯಕನಾಗಿ ಅಭಿನಯಿಸುತ್ತಿರುವ ‘ಮದುವೆಮನೆ’ಗೆ ಯೋಗರಾಜ್ಭಟ್ ಬರೆದಿರುವ ‘ಒಳ್ಳೆಯ ರೀತಿಯಲ್ಲಿ ಮಾತನೊಂದ’ ಹಾಡಿನ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯಿತು. ರೈಲು ಪ್ರಯಾಣದೊಂದಿಗೆ ಈ ಹಾಡಿನ ಚಿತ್ರೀಕರಣ ಸಾಗಿತು. ರಾಮು ನೃತ್ಯ ನಿರ್ದೇಶನದಲ್ಲಿ ನಾಯಕಿ ಶ್ರದ್ಧಾ ಆರ್ಯ ಮತ್ತು 50ಜನ ನರ್ತಕರು ಹೆಜ್ಜೆ ಹಾಕಿದರು.
ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ಸುನೀಲ್ಕುಮಾರ್ಸಿಂಗ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ನಿರ್ದೇಶಕರಿಗೆ ಇದು ಚೊಚ್ಚಲ ಚಿತ್ರ. ಮಣಿಕಾಂತ್ ಕದ್ರಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್ಚಂದ್ರು ರವರ ಛಾಯಾಗ್ರಹಣ, ಕೃಷ್ಣ ಲೇಖನ ಸಹನಿರ್ದೇಶನ, ಸೌಂದರ್ರಾಜ್ ಸಂಕಲನ, ರವಿವರ್ಮ ಸಾಹಸ ಹಾಗೂ ಮೋಹನ್ ಬಿ. ಕೆರೆ ಕಲಾನಿರ್ದೇಶನವಿದೆ. ಅವಿನಾಶ್(ಜುಗಾರಿ), ತಬಲಾ ನಾಣಿ, ಶರಣ್, ಅರವಿಂದ್, ಹನುಮಂತೇಗೌಡ, ಕೆ.ವಿ.ನಾಗೇಶ್ಕುಮಾರ್ ಇತರರು ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.