ADVERTISEMENT

ಮಾಸಾಂತ್ಯಕ್ಕೆ ‘ಮರ್ಯಾದೆ’ ತೆರೆಗೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ನಾಗರಾಜ್ ಹಾಗೂ ಅನುವ್ಯಕ್ತ ನಿರ್ಮಿಸಿರುವ ‘ಮರ್ಯಾದೆ’ ಚಿತ್ರ ಮಾಸಾಂತ್ಯಕ್ಕೆ ಬಿಡುಗಡೆಯಾಗಲಿದೆ. ಮಹಾರಾಜ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ನಾಗರಾಜ್ ಹಾಗೂ ರವಿಚೇತನ್ ಅಭಿನಯಿಸಿದ್ದಾರೆ.

ಹರ್ಷಿಕಾ ಪೂಣಚ್ಚ ನಾಯಕಿಯ ಬಣ್ಣ ಹಚ್ಚಿದ್ದಾರೆ. ಲಯನ್ ಕೋಕಿಲ, ಅವಿನಾಶ್, ಸುಚೇಂದ್ರ ಪ್ರಸಾದ್, ಕಿಶೋರ್‌ವಸಿಷ್ಠ, ಕುಮುದಾ ಇತರರು ಇದ್ದಾರೆ. ಉತ್ಪಾಲ್ ಛಾಯಾಗ್ರಹಣ, ದಿನ್ನಿ ವಿನ್ಸನ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.