‘ಪಿನ್ನೆಯುಮ್’ ಚಿತ್ರದ ಬಳಿಕ ತೆರೆಮರೆಗೆ ಸರಿದಿದ್ದ ಮಲಯಾಳಂನ ದಿಗ್ಗಜ ನಿರ್ದೇಶಕ ಅಡೂರು ಗೋಪಾಲಕೃಷ್ಣ ಅವರು ಮತ್ತೆ ನಿರ್ದೇಶಕರ ಟೋಪಿ ಧರಿಸಲಿದ್ದಾರೆ. ಆದರೆ ಪೂರ್ಣಪ್ರಮಾಣದ ಸಿನಿಮಾದ ಬದಲಾಗಿ ಕಿರುಚಿತ್ರದ ನಿರ್ದೇಶನಕ್ಕಾಗಿ!
ಕೇವಲ 20 ನಿಮಿಷಗಳ ಈ ಕಿರುಚಿತ್ರದ ಶೀರ್ಷಿಕೆ‘ಸುಖಾಂತ್ಯಂ’. ಇಂಟರ್ನೆಟ್ನಲ್ಲಿ ಬಿಡುಗಡೆಯಾಗಲಿರುವ ಕಿರುಚಿತ್ರದತಾರಾಗಣ ಮಾತ್ರ ಭರ್ಜರಿಯಾಗಿದೆ. ಮುಕೇಶ್ ಪದ್ಮಪ್ರಿಯಾ, ಇಂದ್ರನ್ ಮತ್ತು ಅಲೆನ್ಸಿಯರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ‘ಸುಖಾಂತ್ಯ’ದಲ್ಲಿ ಯಾವ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದು ರಹಸ್ಯವಾಗಿದೆ. ಚಿತ್ರೀಕರಣ ಆರಂಭವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.