ಹುಬ್ಬಳ್ಳಿ: ಅಘೋರ ಎಂಬ ಕನ್ನಡ ಸಿನಿಮಾ ಮಾ. 4ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿನಿಮಾ ನಿರ್ದೇಶಕ ಎನ್.ಎಸ್. ಪ್ರಮೋದ ರಾಜ್ "ಪ್ರಕೃತಿಯನ್ನು ಆಧರಿಸಿ ಸಿನಿಮಾ ಲಾಗಿದ್ದು, ವೆಂಕಟೇಶ ಯುಡಿವಿ, ಸಿಜಿ ಮತ್ತು ವಿಎಫ್ಎಕ್ಸ್ ಫಿಕ್ಸೆಲ್ ಫ್ರೇಮ್ ಸಂಕಲನದಲ್ಲಿ ಚಿತ್ರ ಮಾಡಲಾಗಿದೆ’ ಎಂದರು.
’ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ ಮತ್ತು ಪಕೃತಿ ಎಂಬ ಐದು ಪ್ರಮುಖ ಪಾತ್ರಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರ ಕಥೆ ವಿಭಿನ್ನವಾಗಿದೆ. ನಮ್ಮ ಹೊಸ ಪ್ರಯೋಗ ಜನರಿಗೆ ಇಷ್ಟವಾಗುವ ಭರವಸೆಯಿದೆ. ರಾಜ್ಯದಾದ್ಯಂತ ಮೊದಲ ದಿನ 250ಕ್ಕೂ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು. ಸಿನಿಮಾದ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿದ್ದಾರೆ.
‘ಬೆಂಗಳೂರಿನಲ್ಲಿಯೇ ಬಹುತೇಕ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಒಂದು ಹಾಡು ಇದೆ’ ಎಂದರು.
ಸಿನಿಮಾದ ನಾಯಕ ಮತ್ತು ನಿರ್ಮಾಪಕ ಪುನೀತ್ ಎಂ.ಎನ್. ಮಾತನಾಡಿ ’ಛಾಯಾಗ್ರಹಣ ಶರತ್ ಕುಮಾರ್, ಹಿನ್ನೆಲೆ ಸಂಗೀತ ಎ.ಬಿ. ಮುರುಳೀಧನ್ ಮತ್ತು ಪ್ರವೀಣ್ ಪೌಲ್, ಸಾಹಿತ್ಯ ಸಂಗೀತ ಡಾ.ವಿ. ನಾಗೇಂದ್ರ ಪ್ರಸಾದ್ ಸೇರಿದಂತೆ ಅನೇಕರು ಕೈ ಜೋಡಿಸಿದ್ದಾರೆ’ ಎಂದು ಹೇಳಿದರು.
ಸಿನಿಮಾ ನಟಿಯರಾದ ರಚನಾ ದಶರಥ, ದ್ರವ್ಯ ಶೆಟ್ಟಿ, ಛಾಯಾಗ್ರಹಕ ಶರತ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.