ADVERTISEMENT

‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 19:30 IST
Last Updated 21 ಮಾರ್ಚ್ 2019, 19:30 IST
‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದಲ್ಲಿ ತ್ರಿವೇಣಿ ಕೃಷ್ಣ ಮತ್ತು ಶೌರ್ಯ 
‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದಲ್ಲಿ ತ್ರಿವೇಣಿ ಕೃಷ್ಣ ಮತ್ತು ಶೌರ್ಯ    

ಜನನಿ ಫಿಲಂಸ್‌ ಲಾಂಛನದಡಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದ ಶೂಟಿಂಗ್‌ ಆರಂಭವಾಗಿದೆ.‌

ರತನ್ ತೀರ್ಥ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯ ನೊಗವನ್ನೂ ಹೊತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣವು 10 ದಿನಗಳ ಬೆಂಗಳೂರಿನ ಸುತ್ತಮುತ್ತ ನಡೆಯಲಿದೆ. ತ್ರಿವೇಣಿ ಕೃಷ್ಣ ಮತ್ತು ಶೌರ್ಯ ನಾಯಕಿ, ನಾಯಕನಾಗಿ ಬಣ್ಣಹಚ್ಚಿದ್ದಾರೆ.

ಛಾಯಾಗ್ರಹಣ ಸತೀಶ್ ರಾಜೇಂದ್ರನ್ ಅವರದ್ದು. ನಾಗಭೂಷಣ್ ಸಾಹಿತ್ಯ, ವಿಜಯ್ ರಾಜ್ ಸಂಗೀತ ಸಂಗೀತ ಸಂಯೋಜಿಸಿದ್ದಾರೆ. ಉಜ್ವಲ್‍ಗೌಡ ಅವರ ಸಂಕಲನವಿದೆ. ಶಂಕರ್ ಅಶ್ವತ್ಥ್, ನಿಖಿಲ್‍ ಗೌಡ, ಸುಮಂತ್, ಭಾರತಿ ತಾರಾಗಣದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.