ADVERTISEMENT

ಬಂಡಿಪುರದಲ್ಲಿ ಮರೆಯಲಾಗದ ಅನುಭವ: ಚೊಚ್ಚಲ ಟಿ.ವಿ ಕಾರ್ಯಕ್ರಮದಲ್ಲಿ ರಜನಿಕಾಂತ್‌

ಬೇರ್‌ ಗ್ರಿಲ್ಸ್‌ ಜೊತೆ ತಲೈವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 9:26 IST
Last Updated 29 ಜನವರಿ 2020, 9:26 IST
   

ಬೆಂಗಳೂರು: ಡಿಸ್ಕವರಿ ಚಾನೆಲ್‌ನ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದ ನಿರೂಪಕ ಬೇರ್‌ ಗ್ರಿಲ್ಸ್‌ ಅವರು ನಟ ರಜನಿಕಾಂತ್‌ ಅವರನ್ನು ಬಳಸಿಕೊಂಡು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ತಮ್ಮ ಹೊಸ ಕಾರ್ಯಕ್ರಮದ ಚಿತ್ರೀಕರಣ ಮುಗಿಸಿದ್ದು ಇದುಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ಕೆಲವು ತಿಂಗಳ ಹಿಂದೆ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನು 300 ಕೋಟಿಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು. ಇದೀಗ ರಜನಿಕಾಂತ್‌ ನಮ್ಮ ನೂತನ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಸಿದ್ಧಪಡಿಸಲಾಗುತ್ತಿರುವ ನೂತನ ಸಾಕ್ಷ್ಯಚಿತ್ರ ಎನ್ನಲಾಗಿದ್ದು ಇದು ಹಲವು ಸರಣಿಗಳಲ್ಲಿ ಪ್ರಸಾರವಾಗಲಿದೆ. ಈ ಸರಣಿಯ ಮೊದಲ ಕಾರ್ಯಕ್ರಮದಲ್ಲಿ ರಜನಿಕಾಂತ್‌ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿ ಬಂಡಿಪುರದಲ್ಲಿ ಚಿತ್ರಿಕರಣ ನಡೆದಿದೆ. ಈ ಕಾರ್ಯಕ್ರಮ ಕುರಿತಾದ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ADVERTISEMENT

ಬಂಡಿಪುರದಲ್ಲಿಬೇರ್‌ ಗ್ರಿಲ್ಸ್‌ ಜೊತೆಯಲ್ಲಿ ಸುತ್ತಾಡಿದ್ದು ಮರೆಯಲಾಗದ ಅನುಭವ ಎಂದು ರಜಿನಿಕಾಂತ್‌ ಟ್ವೀಟ್‌ ಮಾಡಿದ್ದಾರೆ.

ಮೂರು ದಿನಗಳ ಚಿತ್ರೀಕರಣಕ್ಕೆ ಅರಣ್ಯ ಇಲಾಖೆಯು ಅನುಮತಿ ನೀಡಿತ್ತು. ಬುಧವಾರದ ಮಧ್ಯಾಹ್ನದವರೆಗೂ ಚಿತ್ರಿಕರಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಮಂಗಳವಾರವೇ ಚಿತ್ರಿಕರಣ ಪೂರ್ಣಗೊಂಡಿದೆ.

ರಜನಿಕಾಂತ್‌ ಅವರು ಸೋಮವಾರವೇ ಬಂಡೀಪುರದಲ್ಲಿರುವ ಸೆರಾಯ್‌ ರೆಸಾರ್ಟ್‌ಗೆ ಬಂದು ತಂಗಿದ್ದರು. ಬೇರ್‌ ಗ್ರಿಲ್ಸ್‌ ಮಂಗಳವಾರ ಬೆಳಿಗ್ಗೆಹೆಲಿಕಾಪ್ಟರ್‌ನಲ್ಲಿ ಗುಂಡ್ಲುಪೇಟೆಗೆ ಬಂದಿಳಿದಿದ್ದರು. ಮಂಗಳವಾರ ಚಿತ್ರೀಕರಣ ಮುಗಿಸಿದ ನಂತರ ರಜನಿಕಾಂತ್‌ ಚೆನ್ನೈಗೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.