‘ಡೈಲಾಗ್ ಕಿಂಗ್’ ಸಾಯಿಕುಮಾರ್ ಮತ್ತು ಅವರ ಸಹೋದರರಾದ ರವಿಶಂಕರ್, ಅಯ್ಯಪ್ಪ ಪಿ. ಶರ್ಮ ಕನ್ನಡ ಚಿತ್ರರಂಗದಲ್ಲಿ ಮನೆಮಾತಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ಮೂವರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಹೊಸ ಸುದ್ದಿ.
ಚೇತನ್ ಕುಮಾರ್ ನಿರ್ದೇಶನದ ನಟ ಶ್ರೀಮುರಳಿ ನಟನೆಯ ‘ಭರಾಟೆ’ ಚಿತ್ರದಲ್ಲಿ ಈ ಮೂವರು ಸಹೋದರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರವಿಶಂಕರ್ ಮತ್ತು ಅಯ್ಯಪ್ಪ ಅವರ ಭಾಗದ ಶೂಟಿಂಗ್ ಈಗಾಗಲೇ ಮುಗಿದಿದೆಯಂತೆ. ಶೀಘ್ರವೇ, ಸಾಯಿಕುಮಾರ್ ಅವರು ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರಂತೆ.
ರವಿಶಂಕರ್ ಮತ್ತು ಸಾಯಿಕುಮಾರ್ ಕನ್ನಡ ಮತ್ತು ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಯ್ಯಪ್ಪ ಅವರು ‘ಕೆಜಿಎಫ್’ ಚಿತ್ರದಲ್ಲೂ ನಟಿಸಿದ್ದಾರೆ. ‘ಭರಾಟೆ’ ಕೌಟುಂಬಿಕ ಪ್ರಧಾನ ಚಿತ್ರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.