ADVERTISEMENT

ಚನ್ನಪಟ್ಟಣಕ್ಕೆ‌ ಸುದೀಪ್ ಭೇಟಿ: ಅಭಿಮಾನಿಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 9:20 IST
Last Updated 3 ಸೆಪ್ಟೆಂಬರ್ 2021, 9:20 IST
ಕಿಚ್ಚ ಸುದೀಪ
ಕಿಚ್ಚ ಸುದೀಪ   

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ನಟ ಸುದೀಪ್ ಶುಕ್ರವಾರ ಭೇಟಿ ನೀಡಿದರು.

65 ಅಡಿ‌ ಎತ್ತರದ
ಚಾಮುಂಡೇಶ್ವರಿ‌ ವಿಗ್ರಹವನ್ನು ಸುದೀಪ್ ವೀಕ್ಷಿಸಿ, ದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿಯಿಂದ ಸುದೀಪ್ ಗೆ ಚಾಮುಂಡೇಶ್ವರಿ ವಿಗ್ರಹದ ಫೋಟೊ ಫ್ರೇಮ್ ನೀಡಿ ಸನ್ಮಾನಿಸಲಾಯಿತು.

ಸುದೀಪ್ ರನ್ನು ನೋಡಲೆಂದೇ ಅವರ ಅಭಿಮಾನಿಗಳು ಬಂದಿದ್ದು, ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತ ಸಂಭ್ರಮಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.