ಬೆಂಗಳೂರು: ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರ್ಆರ್ಆರ್ ಇದೇ ಮಾರ್ಚ್ 25 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಚಿಕ್ಕಬಳ್ಳಾಪುರ ಬಳಿಯ ಅಗಲಗುರ್ಕಿ ಬಳಿ ಚಿತ್ರದ ಅದ್ಧೂರಿ ಬಿಡುಗಡೆ ಪೂರ್ವ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಜನ ಸೇರಿದ್ದರು ಎನ್ನಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಭಾಗವಹಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.ಈ ವೇಳೆ ಸಿಎಂ ಬೊಮ್ಮಾಯಿ ಸಿನಿ ಸ್ಟಾರ್ಗಳಿಗೆ ಕಮ್ಮಿ ಎನಿಸದೇ ಮಿಂಚಿದರು. ರಾಜಮೌಳಿ ಒಬ್ಬ ಕ್ರಿಯೇಟರ್ ಎಂದು ಕೊಂಡಾಡಿದರು. ಈ ಸಂದರ್ಭದಲ್ಲಿ ಕಂಡು ಬಂದ ಚಿತ್ರಗಳು ಇಲ್ಲಿವೆ.ಚಿತ್ರ ಕೃಪೆ– RRRMovie ಟ್ವಿಟರ್ ಹ್ಯಾಂಡಲ್
ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 8:34 IST
Last Updated 20 ಮಾರ್ಚ್ 2022, 8:34 IST
ರಾಜಮೌಳಿ ಹಾಗೂ ನಟ ರಾಮ್ಚರಣ್ ಅವರೊಂದಿಗೆ ಸಿಎಂ ಬೊಮ್ಮಾಯಿ
ರಾಮ್ಚರಣ್ ಅವರೊಂದಿಗೆ ಸಿಎಂ ಬೊಮ್ಮಾಯಿ
ನಟ ಜೂನಿಯರ್ ಎನ್ಟಿಆರ್ ಅವರೊಂದಿಗೆ ಬೊಮ್ಮಾಯಿ
ನಟ ಜೂನಿಯರ್ ಎನ್ಟಿಆರ್ ಹಾಗೂ ರಾಜಮೌಳಿ, ರಾಮ್ಚರಣ್ ಅವರೊಂದಿಗೆ ಬೊಮ್ಮಾಯಿ