ದಾವಣಗೆರೆ: ಎಲ್ಲ ಕಡೆ ಇರುವಂತೆ ಸ್ಯಾಂಡಲ್ವುಡ್ನಲ್ಲೂ ಒಳ್ಳೆಯವರು ಮತ್ತು ಕೆಟ್ಟವರಿರುತ್ತಾರೆ. ಹಾಗಂತ ಸ್ಯಾಂಡಲ್ವುಡ್ನ ಎಲ್ಲರೂ ಕೆಟ್ಟವರು ಎಂದು ಹೇಳಲು ಆಗದು ಎಂದು ನಟ ದರ್ಶನ್ ಪ್ರತಿಕ್ರಿಯಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಒಂದು ತರಗತಿಯಲ್ಲಿ ರ್ಯಾಂಕ್ ವಿದ್ಯಾರ್ಥಿಗಳೂ, ಸೊನ್ನೆ ಅಂಕ ಪಡೆಯುವವರೂ ಇರುತ್ತಾರೆ. ಹಾಗೆಂದು ಇಡೀ ತರಗತಿಯನ್ನೇ ಝೀರೊ ಎಂದು ಹೇಳುವುದಿಲ್ಲ. ಅದೇ ರೀತಿ ಇದು’ ಎಂದು ವಿಶ್ಲೇಷಿಸಿದರು.
ಇಂದ್ರಜಿತ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇನ್ನೊಬ್ಬರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಡ್ರಗ್ಸ್ ಪ್ರಕರಣ ಸ್ಯಾಂಡಲ್ವುಡ್ಗೆ ಮಾತ್ರವಲ್ಲ, ಕರ್ನಾಟಕಕ್ಕೇ ಕೆಟ್ಟ ಹೆಸರು. ಚಿರು ಅವರ ಹೆಸರು ಕೇಳಿ ಬರುತ್ತಿರುವುದು ಬೇಸರ ಉಂಟುಮಾಡಿದೆ. ಮೃತಪಟ್ಟಿರುವವರ ಬಗ್ಗೆ ಆರೋಪ ಮಾಡಿ ಶಿಕ್ಷೆ ಕೊಡಿಸಲು ಆಗುತ್ತಾ? ಯಾರೇ ಆಗಲಿ ಸತ್ತವರ ಬಗ್ಗೆ ಒಳ್ಳೆಯದನ್ನು ಮಾತನಾಡೋಣ’ ಎಂದು ಹೇಳಿದರು.
‘ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯಾರೆಲ್ಲ ಇದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಅಲ್ಲಿವರೆಗೆ ಕಾಯೋಣ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.