ಮಾತನಾಡುವ ಗೊಂಬೆ ಡಿಂಕುವಿನ ಕುರಿತಾದ ಕಥೆ ಹೊಂದಿರುವ ‘ಡಿಂಕು’ ಇದೇ ತಿಂಗಳು ತೆರೆಗೆ ಬರಲಿದೆ. ಈ ಹಿಂದೆ ಕೆಲ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜೇಶ್ಮೂರ್ತಿ ಈ ಚಿತ್ರದ ನಿರ್ದೇಶಕರು. ಹಿರಿಯ ಛಾಯಾಚಿತ್ರಗ್ರಾಹಕ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗ ಯಶಸ್ವಾ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
‘ಡಿಂಕು ಗೊಂಬೆ ಶೋ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿದೆ. ಪಪ್ಪೆಟ್ ಶೋ ನಡೆಸುವ ಯುವತಿ ಹಾಗೂ ಆಕೆಯ ಪ್ರೀತಿಯ ಗೊಂಬೆಯಾದ ಡಿಂಕು ಸುತ್ತ ನಡೆಯುವ ಸ್ವಾರಸ್ಯಕರ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದ ಎಡಿಟಿಂಗ್ ಕಾರ್ಯ ಮುಗಿದು ಡಬ್ಬಿಂಗ್ ಕೊನೆಯ ಹಂತದಲ್ಲಿದೆ. ಈ ತಿಂಗಳ ಅಂತ್ಯದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು.
ಯುವನಟಿ ಸನ್ನಿಧಿ ಚಿತ್ರದ ನಾಯಕಿ. ನೆಲ ಮಹೇಶ್ ಹಾಗೂ ನೇವಿ ಮಂಜು ನಿರ್ಮಾಪಕರು. ಚಿತ್ರದ ಎರಡು ಹಾಡುಗಳಿಗೆ ನಿತೀಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.