ADVERTISEMENT

ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಎನ್ನಾರ್.ಕೆ.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 20:37 IST
Last Updated 14 ಜೂನ್ 2023, 20:37 IST
ಎನ್ನಾರ್‌ ಕೆ. ವಿಶ್ವನಾಥ್‌
ಎನ್ನಾರ್‌ ಕೆ. ವಿಶ್ವನಾಥ್‌   

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಎನ್ನಾರ್.ಕೆ.ವಿಶ್ವನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಸಂಘದ ಚುನಾವಣೆ ನಡೆದಿದ್ದು, ಎನ್‌.ಆರ್‌.ನಂಜುಂಡೇಗೌಡರು ಸಂಘದ ಅಧ್ಯಕ್ಷರಾಗಿದ್ದರು. ಅವರು ಕಾರಣಾಂತರಗಳಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. 

ನಂತರ ಹೊಸ ಸಮಿತಿ ರಚನೆಯಾಗಿದ್ದು, ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ವಿಜೇತರಾಗಿದ್ದ ಎನ್ನಾರ್.ಕೆ.ವಿಶ್ವನಾಥ್ ಅವರನ್ನು ಅಧ್ಯಕ್ಷರಾಗಿ ಸಮಿತಿ ಆಯ್ಕೆ ಮಾಡಿದೆ. ಉಪಾಧ್ಯಕ್ಷರಾಗಿ ಎಸ್.ಕೆ.ನಾಗೇಂದ್ರ ಅರಸ್ ಮತ್ತು ಜಗದೀಶ್ ಕೊಪ್ಪ, ಕಾರ್ಯದರ್ಶಿಯಾಗಿ ವಿಶಾಲ್ ಧೀರಜ್, ಜಂಟಿ ಕಾರ್ಯದರ್ಶಿಯಾಗಿ ಮಳವಳ್ಳಿ ಸಾಯಿಕೃಷ್ಣ, ಖಜಾಂಚಿಯಾಗಿ ಆರ್.ಮಂಜುನಾಥ ದೈವಜ್ಞ ಆಯ್ಕೆಯಾಗಿದ್ದಾರೆ. ಬಿ.ರಾಮಮೂರ್ತಿ, ಜೋ ಸೈಮನ್, ಪಿ.ಉಮೇಶ್‌ ನಾಯಕ್, ಬಸವರಾಜ ಬಳ್ಳಾರಿ, ಎಂ.ಮಂಜುನಾಥ್ ಮಸ್ಕಲ್‌ಮಟ್ಟಿ, ಸಬಾಸ್ಟಿನ್‌ ಡೇವಿಡ್, ಶ್ರೀನಾಥ್ ವಸಿಷ್ಠ, ಎಂ.ಪಿ.ಆರಿಫ್ ಆದತ್ ಮತ್ತು ಎಂ.ಬಿ.ರಾಮ್ ಪ್ರಸಾದ್ ಕಾರ್ಯಕಾರಿ ಸಮಿತಿಯಲ್ಲಿದ್ದಾರೆ. 

ADVERTISEMENT

ಸಂಘದ ಸರ್ವಸದಸ್ಯರ ಸಭೆಯು ಜೂನ್ 25 ರಂದು ಬೆಳಿಗ್ಗೆ 10.30ಕ್ಕೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.