ADVERTISEMENT

ಸುಶಾಂತ್ ಪ್ರಕರಣದಲ್ಲಿ ರಿಯಾಳಿಗೆ ಅನ್ಯಾಯವಾಯಿತು: ನಟ ಇಮ್ರಾನ್‌ ಹಶ್ಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2021, 11:13 IST
Last Updated 21 ಆಗಸ್ಟ್ 2021, 11:13 IST
ಬಾಲಿವುಡ್‌ ನಟ ಇಮ್ರಾನ್‌ ಹಶ್ಮಿ
ಬಾಲಿವುಡ್‌ ನಟ ಇಮ್ರಾನ್‌ ಹಶ್ಮಿ    

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯೊಂದಿಗೆ ನಡೆದಿದ್ದು ನ್ಯಾಯಸಮ್ಮತವಲ್ಲ ಎಂದು ಬಾಲಿವುಡ್‌ ನಟ ಇಮ್ರಾನ್‌ ಹಶ್ಮಿ ಅಭಿಪ್ರಾಯಪಟ್ಟಿದ್ದಾರೆ.

ಜೂನ್ 14, 2020 ರಂದು ಮುಂಬೈನ ಬಾಂದ್ರಾದ ಅಪಾರ್ಟ್‌ಮೆಂಟ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಕುಟುಂಬದವರು ರಿಯಾ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಸಿಬಿಐ ರಿಯಾಳನ್ನು ಬಂಧಿಸಿ 28 ದಿನ ಜೈಲಿಗೆ ಕಳುಹಿಸಿತ್ತು. ಸದ್ಯ ರಿಯಾ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

ಬಾಲಿವುಡ್‌ ಹಂಗಾಮಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಇಮ್ರಾನ್‌ ಹಶ್ಮಿ, 'ಕೇವಲ ಊಹಾಪೋಹಗಳಿಂದ ಕಥೆಗಳನ್ನು ಕಟ್ಟಲಾಯಿತು. ಮಾಧ್ಯಮಗಳಿಂದ ಪ್ರಕರಣದ ನ್ಯಾಯಾಂಗ ವಿಚಾರಣೆಯೇ ನಡೆದುಹೋಯಿತು. ಆ ಮೂಲಕ ಮಾಧ್ಯಮಗಳು ಒಂದು ಕುಟುಂಬದ ನೆಮ್ಮದಿಯನ್ನೇ ನಾಶಮಾಡಿದವು' ಎಂದು ಹಶ್ಮಿ ತಿಳಿಸಿದ್ದಾರೆ.

ADVERTISEMENT

ಮಾಧ್ಯಮಗಳು ಮೌಲ್ಯಗಳನ್ನು ಅನುಸರಿಸಬೇಕು ಎಂದು ಇಮ್ರಾನ್‌ ಹಶ್ಮಿ ಇದೇ ವೇಳೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.