ಕನ್ನಡದ ಒಟಿಟಿ ‘ಫಿಲ್ಮ್ಶಾಪ್’ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕಿರುಚಿತ್ರೋತ್ಸವ ಸ್ಪರ್ಧೆ ಆಯೋಜಿಸಿದೆ.
ಫಿಲ್ಮ್ಶಾಪ್ನಿರ್ದೇಶಕ ಮತ್ತುನಿರ್ಮಾಪಕ ಬಿ.ಅರ್. ಕೇಶವ್ ಹುಟ್ಟು ಹಾಕಿರುವ ಒಟಿಟಿ ವೇದಿಕೆ. ಸಿನಿಮಾ ಮತ್ತು ಕಿರುತೆರೆಗೆ ಹೊಸದಾಗಿ ಪ್ರವೇಶಿಸುವ ಯುವ ನಿರ್ದೇಶಕರಿಗೆಒಂದು ವೇದಿಕೆ ಕಲ್ಪಿಸುವ ಸಲುವಾಗಿ ಈ ಕಿರುಚಿತ್ರೋತ್ಸವ ಸ್ಪರ್ಧೆ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಕನ್ನಡ ನೆಲ, ಜಲ, ಕನ್ನಡ ಹೋರಾಟಗಾರರು, ಕನ್ನಡ ಸಾಹಿತ್ಯ, ಚಲನಚಿತ್ರ, ಕರ್ನಾಟಕದ ಹಿರಿಮೆ ಸಾರುವ ವಿಷಯದ ಕುರಿತು ಸಿದ್ಧಪಡಿಸಲಾದಕನಿಷ್ಠ 8 ನಿಮಿಷದಿಂದ ಗರಿಷ್ಠ10 ನಿಮಿಷ ಅವಧಿಯಕಿರುಚಿತ್ರಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.
ಕಿರುಚಿತ್ರವುಸಂಪೂರ್ಣ ಎಚ್ಡಿ ಫಾರ್ಮ್ಯಾಟ್ನಲ್ಲಿರಬೇಕು. ಬೇರೆ ಯಾವುದೇ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರಬಾರದು. ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಲು ಅ. 31 ಕೊನೆ ದಿನ. ವಿಜೇತ ಕಿರುಚಿತ್ರಗಳ ಫಲಿತಾಂಶವನ್ನುಜನಮತದಿಂದ ನಿರ್ಧರಿಸಲಾಗುತ್ತದೆ.ವಿಜೇತ ಕಿರುಚಿತ್ರಗಳಿಗೆ ಕ್ರಮವಾಗಿ ಪ್ರಥಮ ₹25,000, ದ್ವಿತೀಯ ₹15,000 ಹಾಗೂ ತೃತೀಯ ₹10,000 ನಗದು ಬಹುಮಾನ ನೀಡಲಾಗುತ್ತಿದೆ.
ನವೆಂಬರ್ 1ರಿಂದ 29ರವರೆಗೆ ಈ ಕಿರುಚಿತ್ರೋತ್ಸವ ನಡೆಯಲಿದ್ದು, ನ.30ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ಘೋಷಿಸಲಾಗುವುದು.filmshoppott@gmail.comಗೆ ಕಿರುಚಿತ್ರ ಕಳುಹಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.