ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಎಂಬುದೇ ‘ಹೊಸ ದಿನಚರಿ’ಯ ಕಥೆ.
ಈ ಕಥೆಯನ್ನಿಟ್ಟುಕೊಂಡು ‘ಹೊಸ ದಿನಚರಿ’ ಸಿದ್ಧವಾಗಿದೆ.‘ಆಯನ’ ಚಿತ್ರ ನಿರ್ಮಿಸಿದ್ದ ಗಂಗಾಧರ ಸಾಲಿಮಠ ಅವರು ಈ ಚಿತ್ರದ ನಿರ್ಮಾಪಕರು. ಚಿತ್ರದ ‘ನಿನ್ನದೇ ನೆನಪು ಗೀತೆ’ ಇತ್ತೀಚೆಗೆ ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದೆ.
ವಾಸುಕಿ ವೈಭವ್ ಅವರ ಕಂಠದಲ್ಲಿ ಮೂಡಿಬಂದಿರುವ ಈ ಗೀತೆ, ಎಲ್ಲೆಡೆ ಮೆಚ್ಚುಗೆ ಗಳಿಸಿದೆ. ಕಳೆದುಕೊಂಡಿರುವ ಹಳೇ ಪ್ರೀತಿಯನ್ನು ನೆನಪು ಮಾಡುವುದರಲ್ಲಿ ಯಶಸ್ವಿಯಾಗಿದೆ ಎಂದಿದೆ ಚಿತ್ರತಂಡ. ವೈಶಾಕ್ ವರ್ಮಾ ಸಾಹಿತ್ಯ ಹಾಗೂ ಸಂಗೀತ ಚಿತ್ರಕ್ಕಿದೆ. ಕೀರ್ತಿ ಶೇಖರ್ ಮತ್ತು ವೈಷಾಕ್ ಪುಷ್ಪಲತಾ ನಿರ್ದೇಶಕರು. ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ್ ಸಾಲಿಮಠ ಬಂಡವಾಳ ಹೂಡಿದ್ದಾರೆ. ಚಿತ್ರ ಡಿ. 9ರಂದು ತೆರೆಗೆ ಬರಲಿದೆಯಂತೆ.
ದೀಪಕ್ ಸುಬ್ರಹ್ಮಣ್ಯ,ಚೇತನ್ ವಿಕ್ಕಿ ಈ ಚಿತ್ರದ ನಾಯಕರು. ಮಂದಾರ, ವರ್ಷಾ ನಾಯಕಿಯರು. ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ವಿವೇಕ್ ದೇವ್, ಶ್ರೀಪ್ರಿಯ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.