ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಬಾಲಿವುಡ್ಗೆ ಬಂದಾಗಿನಿಂದಲೂ ಒಂದಲ್ಲ ಒಂದು ವಿಚಾರಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಪುಸ್ತಕವನ್ನು ತಲೆಕೆಳಗಾಗಿ ಹಿಡಿದಿದ್ದರಿಂದ ಟ್ರೋಲ್ಗೆ ಒಳಗಾಗಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಜಾಹ್ನವಿ ಭಾಗವಹಿಸಿದ್ದರು. ಆ ಸಮಾರಂಭದಲ್ಲಿ ಸೀರೆ ಉಟ್ಟಿದ್ದ ಅವರು ಸೌಂದರ್ಯದ ಗಣಿಯಂತೆ ಕಾಣುತ್ತಿದ್ದರು. ಆದರೆ ಅಲ್ಲಿ ಮಾಡಿದ ಸಣ್ಣ ಎಡವಟ್ಟಿನಿಂದ ಟ್ರೋಲ್ಗೆ ಒಳಗಾಗಿದ್ದಾರೆ.
ಹರಿಂದರ್ ಸಿಕ್ಕಾ ಅವರ ‘ಕಾಲಿಂಗ್ ಸೆಹ್ಮತ್’ ಬಿಡುಗಡೆ ಸಮಾರಂಭದಲ್ಲಿ ಜಾಹ್ನವಿ ಪುಸ್ತಕವನ್ನು ತಲೆಕೆಳಗಾಗಿ ಹಿಡಿದಿರುವ ಫೋಟೋಗಳನ್ನು ಛಾಯಾಗ್ರಾಹಕರೊಬ್ಬರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದು ಪ್ರಕಟವಾಗುತ್ತಿದ್ದಂತೆ ನೆಟ್ಟಿಗರಿಂದ ‘ಮಿದುಳಿಲ್ಲದ ಸೌಂದರ್ಯ, ಪುಸ್ತಕ ಹಿಡಿಯಲು ಬಾರದಂತಹವರನ್ನು ಯಾಕೆ ಪುಸ್ತಕ ಬಿಡುಗಡೆಗೆ ಕರೆಯುತ್ತೀರಿ?’, ಬಾಲಿವುಡ್ ಮಂದಿಗೆ ತಿಳಿವಳಿಕೆ ಇಲ್ಲ, ನಟನೆ, ಎಕ್ಸ್ಪೋಸ್ ಅಷ್ಟೇ ಗೊತ್ತಿರೋದು’ ಮುಂತಾದ ಕಮೆಂಟ್ ಬಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.