ಮೈಸೂರಿನಲ್ಲಿ ಫೆ.11 ಹಾಗೂ 12ರಂದು ನಡೆಯಬೇಕಿದ್ದ ಕನ್ನಡ ಚಲನಚಿತ್ರ ಕಪ್(ಕೆಸಿಸಿ) 3ನೇ ಆವೃತ್ತಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರವಾಗಿದೆ.
ಪಂದ್ಯಾವಳಿಯ ದಿನಾಂಕಗಳೂ ಬದಲಾಗಿದ್ದು ಫೆ.24 ಮತ್ತು 25ರಂದು ನಡೆಯಲಿದೆ. ಈ ಬಾರಿಯ ಕೆಸಿಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಬ್ರಯನ್ ಲಾರಾ, ಸುರೇಶ್ ರೈನಾ, ಕ್ರಿಸ್ ಗೇಲ್, ಬದರೀನಾಥ್, ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಶಾನ್ ಆಡಲಿದ್ದಾರೆ. ಒಟ್ಟು ಆರು ತಂಡಗಳು ಕೆಸಿಸಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.