ಮುಂಬೈ: ಯಾವುದೇ ರೀತಿಯ ತೊಂದರೆಯಾಗದಂತೆ, ಯಾರಿಗೂ ನೋವಾಗದ ರೀತಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಬಾಲಿವುಡ್ ನಟಿ ಸನ್ನಿ ಲಿಯೋನ್ ಗುರುವಾರ ಹೇಳಿದ್ದಾರೆ.
ಜೆಎನ್ಯು ವಿಶ್ವವಿದ್ಯಾಲಯದಲ್ಲಿ ನಡೆದ ದಾಳಿಯನ್ನು ಖಂಡಿಸಿರುವ ಅವರು, ಹಿಂಸಾಚಾರದಿಂದ ಸಂತ್ರಸ್ತರಿಗೆ ನೋವಾಗುವುದಲ್ಲದೆ ಅವರ ಕುಟುಂಬದವರೂನೋವನ್ನು ಅನುಭವಿಸುತ್ತಾರೆ, ದಾಂದಲೆ, ದಾಳಿಯಿಂದ ಯಾವುದೇ ಪ್ರಯೋಜನವಿಲ್ಲ, ಇದರಿಂದ ದ್ವೇಷ ಬೆಳೆಯುತ್ತದೆ, ಆದ್ದರಿಂದ ಯುವ ಜನರು ವೈಷಮ್ಯ ಮರೆತುಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಸನ್ನಿ ಲಿಯೋನ್ ಮನವಿ ಮಾಡಿದ್ದಾರೆ.
ಕಪ್ಪು ಉಡುಗೆಯಲ್ಲಿದ್ದ ಸನ್ನಿ ಲಿಯೋನ್ ಮಾಧ್ಯಮಗಳ ಜೊತೆ ಮಾತನಾಡಿ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿಶಾಂತಿಗೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.