‘ಕಬೀರ್ ಸಿಂಗ್’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಅವರ ಮುಂದಿನ ಚಿತ್ರದಲ್ಲಿ ಟಾಲಿವುಡ್ನ ಸೂಪರ್ಸ್ಟಾರ್ ಪ್ರಿನ್ಸ್ಮಹೇಶ್ ಬಾಬು ನಟಿಸುತ್ತಿದ್ದಾರೆ.
‘ನಾನು ಈಗಾಗಲೇ ಅವರಿಗೆ ಚಿತ್ರಕತೆ ಬಗ್ಗೆ ತಿಳಿಸಿದ್ದೇನೆ. ಚಿತ್ರಕತೆ ಬರೆದು ಮುಗಿಸಿದ ಬಳಿಕ ಅವರನ್ನು ಖುದ್ದು ಭೇಟಿ ಮಾಡಲಿದ್ದೇನೆ’ ಎಂದು ಸಂದೀಪ್ ತಿಳಿಸಿದ್ದಾರೆ. ಇದು ಸಂದೀಪ್ ನಿರ್ದೇಶನದ ಮೂರನೇ ಚಿತ್ರವಾಗಲಿದೆ.
ವಿಜಯ್ ದೇವರಕೊಂಡ ಅಭಿನಯದ ‘ಅರ್ಜುನ್ ರೆಡ್ಡಿ’ ಸಿನಿಮಾದ ಮೂಲಕ ಸಂದೀಪ್ ನಿರ್ದೇಶಕಕ್ಕಿಳಿದಿದ್ದರು. ಆ ಚಿತ್ರವೂ ಬಾಕ್ಸಾಫೀಸಿನಲ್ಲಿ ಯಶಸ್ಸು ಕಂಡಿತ್ತು. ಅನಂತರ ಅದೇ ಚಿತ್ರವನ್ನು ಅವರು ಹಿಂದಿಯಲ್ಲಿ ‘ಕಬೀರ್ ಸಿಂಗ್’ ರಿಮೇಕ್ ಮಾಡಿದ್ದರು. ಆ ಚಿತ್ರವು ಹಿಟ್ ಆಗಿದೆ. ಇವರ ನಿರ್ದೇಶನದ ಎರಡೂ ಚಿತ್ರಗಳು ಭಾರಿ ಯಶಸ್ಸು ಗಳಿಸಿದ್ದರಿಂದ ಅವರ ಮುಂದಿನ ಚಿತ್ರದ ಬಗ್ಗೆ ಎಲ್ಲರ ದೃಷ್ಟಿ ಬಿದ್ದಿದೆ. ಈ ಚಿತ್ರದಲ್ಲಿ ಮಹೇಶ್ಬಾಬು ನಟಿಸಲಿದ್ದಾರೆಯೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.