ADVERTISEMENT

ಉರಿಗೌಡ– ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದ ನಿರ್ಮಾಪಕ ಮುನಿರತ್ನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2023, 19:31 IST
Last Updated 20 ಮಾರ್ಚ್ 2023, 19:31 IST
ನಿರ್ಮಲಾನಂದನಾಥ ಶ್ರೀ, ಮುನಿರತ್ನ
ನಿರ್ಮಲಾನಂದನಾಥ ಶ್ರೀ, ಮುನಿರತ್ನ   

ಮಂಡ್ಯ: ‘ಉರಿಗೌಡ, ದೊಡ್ಡನಂಜೇಗೌಡರ ಕುರಿತು ಸಿನಿಮಾ ಮಾಡುವುದಿಲ್ಲ. ನಿರ್ಮಲಾನಂದನಾಥ ಸ್ವಾಮೀಜಿಯವರ ಸಲಹೆ, ಮಾರ್ಗದರ್ಶನದಂತೆ ಇಲ್ಲಿಗೇ ಕೈಬಿಡುತ್ತೇನೆ’ ಎಂದು ಸಚಿವ, ನಿರ್ಮಾಪಕ ಮುನಿರತ್ನ ಸೋಮವಾರ ಹೇಳಿದರು.

ತಾಲ್ಲೂಕಿನ ಕೊಮ್ಮೇರಹಳ್ಳಿಯ ಆದಿಚುಂಚನಗಿರಿ, ವಿಶ್ವಮಾನವ ಶಾಖಾ ಮಠದ ಆವರಣದಲ್ಲಿ ಸ್ವಾಮೀಜಿ ಅವ
ರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಮೈಸೂರು ಸಂಸ್ಥಾನ, ಟಿಪ್ಪು, ಉರಿಗೌಡ, ನಂಜೇಗೌಡರ ಬಗ್ಗೆ ಒಂದಷ್ಟು ದಾಖಲೆಗಳು ಸಿಕ್ಕಿದ್ದರಿಂದ ಚಿತ್ರ ನಿರ್ಮಿಸಬೇಕೆಂದುಕೊಂಡಿದ್ದೆ. ಸ್ವಾಮೀಜಿಯೊಂದಿಗೆ ಚರ್ಚಿಸಿದ ನಂತರ ಆ ವಿಚಾರ ಬಿಟ್ಟಿದ್ದೇನೆ. ಯಾರ ಮನಸ್ಸನ್ನೂ ನೋಯಿಸಿ ಸಿನಿಮಾ ಮಾಡುವ ಅವಶ್ಯಕತೆ ಇಲ್ಲ ಎನಿಸಿತು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.