ADVERTISEMENT

ಕಂಬನಿ ಮಿಡಿದ ಗಣ್ಯರು: ದೇಶದ ಪ್ರಗತಿ ಬಗ್ಗೆ ಅತೀವ ಆಸಕ್ತಿಯಿತ್ತು– ಮೋದಿ ಟ್ವೀಟ್

ರಿಷಿ ಕಪೂರ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2020, 6:46 IST
Last Updated 30 ಏಪ್ರಿಲ್ 2020, 6:46 IST
ರಿಷಿ ಕಪೂರ್
ರಿಷಿ ಕಪೂರ್   

ಹಿರಿಯ ಬಾಲಿವುಡ್ ನಟ ರಿಷಿ ಕಪೂರ್ ನಿಧನಕ್ಕೆ ಚಿತ್ರ ಜಗತ್ತಿನ ಸ್ಟಾರ್‌ಗಳು, ಹಿರಿಯ ನಟರು, ದೇಶದ ಪ್ರಮುಖ ನಾಯಕರು, ಅಭಿಮಾನಿಗಳುಕಂಬನಿ ಮಿಡಿದಿದ್ದಾರೆ.

ನಿಧನಕ್ಕೆ ಶೋಕ ಸಂದೇಶ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ರಿಷಿ ಕಪೂರ್‌ ಅವರದು ಬಹುಮುಖಿ ಪ್ರತಿಭೆ. ಜೀವಂತಿಕೆ, ಲವಲವಿಕೆಯ ಬದುಕು ಅವರದ್ದಾಗಿತ್ತು. ಅವರೊಂದಿಗಿನ ಸಂವಾದವನ್ನು ನಾನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ. ಅವರಿಗೆ ಭಾರತದ ಪ್ರಗತಿ ಮತ್ತು ಸಿನಿಮಾಗಳ ಬಗ್ಗೆ ಅತೀವ ಆಸಕ್ತಿಯಿತ್ತು’ ಎಂದು ಹೇಳಿದ್ದಾರೆ.

‘ಹಲವು ಪಾತ್ರಗಳಿಗೆ ಜೀವ ತುಂಬಿದ್ದ ರಿಷಿ ಕಪೂರ್ ಉತ್ತಮ ಪ್ರತಿಭೆಯಿದ್ದ ನಟ. ಪ್ರಣಯದ ಚಿತ್ರಗಳು ಅವರಿಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿದ್ದವು. ಅವರ ನಿಧನದಿಂದ ದೇಶವು ತನ್ನ ಪ್ರತಿಭಾವಂತ ಮಗನನ್ನು ಕಳೆದುಕೊಂಡಂತೆ ಆಗಿದೆ’ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

ADVERTISEMENT

‘ಹಿರಿಯ ನಟ ರಿಷಿ ಕಪೂರ್ ಬಾಲಿವುಡ್‌ನ ದಂತಕಥೆಯಾಗಿದ್ದರು. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಸಾವಿನ ಸುದ್ದಿ ಕೇಳಿ ಆಘಾತವಾಯ್ತು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.