ADVERTISEMENT

ಪ್ರಶಾಂತ್ ಸರ್‌, ನೀವು ಭಾರತೀಯ ಚಿತ್ರರಂಗದ ವೀರಪ್ಪನ್‌! -ರಾಮ್‌ ಗೋಪಾಲ್‌ ವರ್ಮಾ

​ಪ್ರಜಾವಾಣಿ ವಾರ್ತೆ
Published 5 ಮೇ 2022, 9:35 IST
Last Updated 5 ಮೇ 2022, 9:35 IST
ವರ್ಮಾ, ಪ್ರಶಾಂತ್‌
ವರ್ಮಾ, ಪ್ರಶಾಂತ್‌   

ಪ್ರಶಾಂತ್ ನೀಲ್‌ ಸರ್‌, ನೀವು ಭಾರತೀಯ ಚಿತ್ರರಂಗದ ವೀರಪ್ಪನ್‌ ಇದ್ದಂತೆ! ಹೀಗೆ ಹೇಳಿದವರು ಟಾಲಿವುಡ್‌ನ ವಿವಾದಿತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ.

ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರಿಗೆ ‘ನಿರ್ದೇಶಕರ ದಿನಾಚರಣೆ‘(ಮೇ 4)ಯ ಶುಭಾಶಯಗಳನ್ನು ಹೇಳಿರುವ ವರ್ಮಾ,ಭಾರತೀಯ ಚಿತ್ರರಂಗ ಹಾಗೂ ಸಿನಿಮಾ ಕಲೆಕ್ಷನ್‌ ಕುರಿತಂತೆ ಟ್ವೀಟ್‌ ಮಾಡಿದ್ದಾರೆ.

ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ ನಿರ್ದೇಶಕರುಗಳ ತಲೆ ಕೆಡಿಸಿದ್ದಕ್ಕೆ ನಾನು ನಿಮಗೆ ಅನ್‌ಹ್ಯಾಪಿ ನಿರ್ದೇಶಕರ ದಿನಾಚರಣೆ ಹೇಳುತ್ತಿದ್ದೇನೆ. ನಿಮ್ಮಿಂದ ಭಾರತೀಯ ಸಿನಿಮಾರಂಗಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ ಎಂದು ವರ್ಮಾ ಹೇಳಿದ್ದಾರೆ

ADVERTISEMENT

ಪ್ರಶಾಂತ್‌ ಅವರೇ , ನೀವು ಕ್ವಿಂಟಾಲ್‌ ಗಟ್ಟಲೆಹಣ ಮಾಡಿದ್ದೀರಾ, ಆದರೆ ಭಾರತೀಯ ಸಿನಿಮಾರಂಗಕ್ಕೆ ಟನ್‌ ಗಟ್ಟಲೆ ಹಣ ನಷ್ಟವಾಗಿದೆ. ಅವರು ಹೊಸ ಆಲೋಚನೆಗೆ, ಡ್ರಾಪ್ಟ್‌ಗೆ, ಮರು ಶೂಟಿಂಗ್‌ಗೆ ಮತ್ತಷ್ಟು ಹಣ ಸುರಿಯಬೇಕಾಗಿದೆಎಂದು ಬರೆದುಕೊಂಡಿದ್ದಾರೆ.

ವರ್ಮಾ ತಮ್ಮ ಟ್ವೀಟ್‌ಗಳ ಮೂಲಕ ಪ್ರಶಾಂತ್‌ ನೀಲ್‌ ಅವರನ್ನು ಹೊಗಳಿದಂತೆಯೂ, ತೆಗಳದಂತೆಯೂ ತಮ್ಮದೇ ಶೈಲಿಯಲ್ಲಿ ವಿಡಂಬನಾತ್ಮಕವಾಗಿಟ್ವೀಟ್‌ ಮಾಡಿದ್ದಾರೆ.

ವರ್ಮಾ ಅವರ ಟ್ವೀಟ್‌ಗಳಿಗೆ ಪ್ರಶಾಂತ್‌ ನೀಲ್‌ ಅವರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌2 ಸಿನಿಮಾ ಗಳಿಕೆಯಲ್ಲಿ ಮುನ್ನುಗುತ್ತಿದೆ. ಈಗಾಗಲೇ ಸಿನಿಮಾ ₹1000 ಕೋಟಿ ಕ್ಲಬ್‌ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.