ಹೈದರಾಬಾದ್:ವಿವಾದಿತ ನಿರ್ಮಾಪಕ, ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್ ಗೋಪಾಲ್ ವರ್ಮ ಇದೀಗ ವಿವಾದಿತ ವ್ಯಕ್ತಿಯೊಬ್ಬರ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಬಗ್ಗೆ ಬಹುಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ
ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ. ಇದಕ್ಕಾಗಿ ಗಾಂಧಿ ಮತ್ತು ಗೋಡ್ಸೆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರನ್ನು ಕೊಲ್ಲಲು ಕಾರಣಗಳೇನು? ಹತ್ಯೆಗೆ ಸಂಚು ರೂಪಿಸಿದ್ದು ಹೇಗೆ ? ಮತ್ತು ಯಾಕೆ ಎಂಬುದೇ ಸಿನಿಮಾದ ಮುಖ್ಯ ಕಥಾ ಹಂದರ. ಇದರಲ್ಲಿ ಗಾಂಧಿ ಪಾತ್ರವನ್ನು ಸಿಮೀತಗೊಳಿಸಲಾಗುವುದು, ಇಡೀ ಸಿನಿಮಾವನ್ನು ಗೋಡ್ಸೆ ಆವರಿಸಿಕೊಳ್ಳಲ್ಲಿದ್ದಾರೆ ಎಂದು ವರ್ಮ ಹೇಳಿದ್ದಾರೆ.
ಈ ಚಿತ್ರಕ್ಕೆ 'ದಿ ಮ್ಯಾನ್ ಹು ಕಿಲ್ಡ್ ಗಾಂಧಿ' ಎಂದು ಹೆಸರಿಡಲಾಗಿದೆ.ಚಿತ್ರದ ಪಾತ್ರದಾರಿಗಳ ಬಗ್ಗೆ ವರ್ಮ ಯಾವುದೇ ಮಾಹಿತಿ ನೀಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.