‘ಐ ಆ್ಯಮ್ ಸಿಂಗಲ್; ನನಗೆ ಹೀಗಿರುವುದೇ ಇಷ್ಟ’
–ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ನಟಿ ರಶ್ಮಿಕಾ ಮಂದಣ್ಣ ನೀಡಿರುವ ಉತ್ತರವಿದು. ನಟ ರಕ್ಷಿತ್ ಶೆಟ್ಟಿ ಜೊತೆಗಿನ ಆಕೆಯ ನಿಶ್ಚಿತಾರ್ಥ ಮುರಿದುಬಿದ್ದಿರುವುದು ಹಳೆಯ ಸುದ್ದಿ. ಆದರೆ, ಇನ್ಸ್ಟಾಗ್ರಾಮ್ನಲ್ಲಿ ಆಕೆಯು ಸಂವಾದ ನಡೆಸುವಾಗ ಪ್ರೀತಿ ವೈಫಲ್ಯ, ಮದುವೆ, ಹೊಸ ಬಾಯ್ ಫ್ರೆಂಡ್ ಇತ್ಯಾದಿ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳುವುದು ಸರ್ವೇ ಸಾಮಾನ್ಯ.
ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ತನ್ನ ವೈಯಕ್ತಿಕ ಬದುಕಿನ ಬಗ್ಗೆ ರಶ್ಮಿಕಾ ನೀಡಿರುವ ಉತ್ತರ ಹೀಗಿದೆ; ‘ನನ್ನ ಹೆಸರನ್ನು ಹಲವು ನಟರೊಟ್ಟಿಗೆ ತಳುಕು ಹಾಕುತ್ತಿರುವುದು ನನಗೂ ಗೊತ್ತಿದೆ. ನಾನು ಈಗ ಒಬ್ಬಂಟಿಯಾಗಿಯೇ ಇದ್ದೇನೆ. ಇದನ್ನು ನೀವು ನಂಬಲೇ ಬೇಕು’ ಎಂದು ಹೇಳಿದ್ದಾರೆ. ಆಕೆಯ ಈ ಹೇಳಿಕೆಗೆ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತನ್ನ ಅಭಿಮಾನಿಗಳಿಗೆ ಆಗಾಗ್ಗೆ ಸಪ್ರೈಸ್ ನೀಡುತ್ತಲೇ ಇರುತ್ತಾರೆ. ಜೊತೆಗೆ, ಸಂವಾದ ಕೂಡ ನಡೆಸುತ್ತಾರೆ. ಈ ಬಾರಿ ಆಕೆ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.
ರಶ್ಮಿಕಾಗೆ ಬಾಲಿವುಡ್ ನಟಿ ಶ್ರೀದೇವಿ ಅವರ ಬಯೋಪಿಕ್ನಲ್ಲಿ ನಟಿಸಲು ಇಷ್ಟವಿದೆಯಂತೆ. ಆಕೆಗೆ ಗುಲಾಬ್ ಜಾಮೂನ್ ಇಷ್ಟವಂತೆ. ‘ಆದರೆ, ಅದು ನನ್ನ ಆರೋಗ್ಯಕ್ಕೆ ಸರಿಹೊಂದುವುದಿಲ್ಲ. ಅದರಲ್ಲಿ ಸಕ್ಕರೆ ಅಂಶ ಹೆಚ್ಚಿರುವುದು ಕಾರಣ. ಆದರೂ, ಅದೇ ನನಗಿಷ್ಟ’ ಎಂದಿದ್ದಾರೆ.
ತೆಲುಗಿನಲ್ಲಿ ರಶ್ಮಿಕಾ ನಟಿಸಿದ ಕೊನೆಯ ಚಿತ್ರ ‘ಭೀಷ್ಮ’. ಇದಾದ ಬಳಿಕ ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಆಕೆ ಧ್ರುವ ಸರ್ಜಾ ಜೊತೆಗೆ ನಟಿಸಿರುವ ‘ಪೊಗರು’ ಸಿನಿಮಾವೂ ಬಿಡುಗಡೆಗೆ ಸಿದ್ಧವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.