ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ‘ಕನ್ನಡಿಗ’ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.
ಇದು ಬಿ.ಎಂ. ಗಿರಿರಾಜ್ ಅವರು ನಿರ್ದೇಶಿಸುತ್ತಿರುವ ಚಿತ್ರ. ರವಿಚಂದ್ರನ್ ಹೇಳುವ ಪ್ರಕಾರ, ‘ನಾನು ಇದುವರೆಗೆ ಅಭಿನಯಿಸಿದ ಎಲ್ಲ ಚಿತ್ರಗಳಿಗಿಂತ ಇದು ತುಂಬಾ ಭಿನ್ನವಾಗಿರಲಿದೆ. ಈ ಪ್ರಕಾರದ ಸಿನಿಮಾ ನನಗೆ ತುಂಬಾ ಹೊಸತು. ಗಿರಿರಾಜ್ ಅವರು ಕಥೆ ಹೇಳಿದಾಗ ತುಂಬಾ ಹಿಡಿಸಿತುʼ ಎಂದರು.
ಈ ಚಿತ್ರಕ್ಕೆ ಚಿತ್ರಕಥೆ ಬರೆದವರೂ ಗಿರಿರಾಜ್ ಅವರೇ.
ಚಿತ್ರದ ಕಥೆ ರೆವರೆಂಡ್ ಕಿಟ್ಟೆಲ್ ಅವರು ಇಂಗ್ಲಿಷ್–ಕನ್ನಡ ಶಬ್ದಕೋಶ ಸಿದ್ಧಪಡಿಸುತ್ತಿದ್ದ ಅವಧಿಯಲ್ಲಿ ನಡೆಯುವ ಘಟನೆಗಳ ಸುತ್ತ ಇದೆ.
ಗಿರಿರಾಜ್ ಹೇಳುವಂತೆ, ‘ರವಿಚಂದ್ರನ್ ಅವರು ತಮ್ಮ ವೃತ್ತಿಬದುಕಿನ ಉತ್ತುಂಗಕ್ಕೆ ಏರಿದ್ದಾರೆ. ಹಾಗಾಗಿ ಹೊಸ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ಬಾಕ್ಸ್ ಆಫೀಸ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನನ್ನ ಈ ದೃಷ್ಟಿಕೋನ ಅವರಿಗೆ ಹಿಡಿಸಿದ ಕಾರಣ ಅವರು ನನ್ನ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ’ ಎಂದರು.
ಕನ್ನಡಿಗ ಚಿತ್ರ ಶೀಘ್ರವೇ ಸೆಟ್ಟೇರಲಿದೆ. ಚಿತ್ರದಲ್ಲಿ ಜಾಮಿ ಆಲ್ಟರ್ (ದಿವಂಗತ ಟಾಮ್ ಆಲ್ಟರ್ ಅವರ ಪುತ್ರ) ಅವರು ಕಿಟ್ಟೆಲ್ ಪಾತ್ರ ನಿರ್ವಹಿಸಲಿದ್ದಾರೆ. ಅಂದಹಾಗೆ ರವಿಚಂದ್ರನ್ ಅವರ ರವಿ ಬೋಪಣ್ಣ ಚಿತ್ರವೂ ಶೀಘ್ರ ಬಿಡುಗಡೆಗೆ ಕಾಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.